ಕೊಪ್ಪಳ: ಹನುಮಮಾಲಾ ವಿಸರ್ಜನೆ ಹಿನ್ನೆಲೆ ಬರುವ ಡಿಸೆಂಬರ್ 9 ರಂದು ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮುಖಂಡ ಸೂರ್ಯ ನಾರಾಯಣ ಹೇಳಿದ್ದಾರೆ.
ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಹನುಮಭಕ್ತರು ಈಗಾಗಲೇ ಹನುಮಮಾಲಾ ಧರಿಸಿ ವೃತ ಕೈಗೊಂಡಿದ್ದಾರೆ. ಇನ್ನೂ ಅನೇಕ ಭಕ್ತರು ಮಾಲೆಯನ್ನು ಧರಿಸಿ ವೃತಾಚರಣೆ ಕೈಗೊಳ್ಳಲಿದ್ದಾರೆ. ಡಿಸೆಂಬರ್ 9 ರಂದು ಈ ವೃತ ಪೂರ್ಣಗೊಳ್ಳಲಿದೆ. ಮಾಲೆ ಧರಿಸಿದ ಮಾಲಾಧಾರಿಗಳು ಗಂಗಾವತಿ ತಾಲೂಕಿನ ಪೌರಾಣಿಕ ನೆಲೆಯಾದ ಅಂಜನಾದ್ರಿ ಬೆಟ್ಟಕ್ಕೆ ಬಂದು ಮಾಲೆಯನ್ನು ವಿಸರ್ಜಿಸಲಿದ್ದಾರೆ. ಈ ಬಾರಿ ಸುಮಾರು 16 ಸಾವಿರದಷ್ಟು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸಲಿದ್ದಾರೆ ಎಂದರು.