ಕೋಲಾರ:ಹಲವು ದಿನಗಳಿಂದ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬೀಳುವ ಮೂಲಕ ಗ್ರಾಮಸ್ಥರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಕೋಲಾರ ತಾಲ್ಲೂಕು ಚಿಕ್ಕಅಯ್ಯೂರು ಗ್ರಾಮದ ಬಳಿಯ ಅರಾಭಿಕೊತ್ತನೂರು ಪ್ರದೇಶದಲ್ಲಿರುವ ಬೆಟ್ಟಗಳ ಸಾಲಿನಲ್ಲಿ ಹಲವು ವರ್ಷಗಳಿಂದ ಹತ್ತಾರು ಚಿರತೆಗಳು ವಾಸವಾಗಿವೆ, ಆಗಾಗ ಈ ಗ್ರಾಮಗಳಿಗೆ ಬಂದು ಕುರಿ, ಕೋಳಿ, ನಾಯಿಗಳನ್ನು ತಿಂದು ಹೋಗೋದು ಸಾಮಾನ್ಯವಾಗಿತ್ತು. ಜೊತೆಗೆ ಈ ಭಾಗದಲ್ಲಿ ಕರಡಿ, ಕಾಡು ಹಂದಿಗಳ ಹಾವಳಿ ಕೂಡಾ ಹೆಚ್ಚಿದೆ. ಹಾಗಾಗಿ ಕಳೆದ ರಾತ್ರಿ ಗ್ರಾಮದ ಅಪ್ಪಯ್ಯಣ್ಣ ಅನ್ನೋ ರೈತರೊಬ್ಬರು ತಮ್ಮ ಬೆಳೆಗೆ ಕಾಡು ಹಂದಿಯ ಹಾವಳಿ ತಡೆಯಲು ತಮ್ಮ ಹೊಲಕ್ಕೆ ಉರುಳು ಹಾಕಿದ್ದರು ಆದರೆ ಕಾಡು ಹಂದಿಗೆ ಹಾಕಿದ್ದ ಉರುಳಿಗೆ ನಾಲ್ಕು ವರ್ಷದ ಹೆಣ್ಣು ಚಿರತೆ ಬಂದು ಸೆರೆಸಿಕ್ಕಿ ಒದ್ದಾಡುತ್ತಿತ್ತು, ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.