ಕರ್ನಾಟಕ

karnataka

ETV Bharat / state

ಕಳೆದ ವರ್ಷ ಕೊಡಗನ್ನು ಮುಳುಗಿಸಿದ್ದ ವರುಣ... ಈ ಬಾರಿ ಮಳೆಗಾಗಿ ಜನರಿಂದ ಪರ್ಜನ್ಯ ಪೂಜೆ!

ಕಳೆದ ಬಾರಿ ಮಳೆಯಿಂದ ನಲುಗಿಹೋಗಿದ್ದ ಕೊಡಗು ಜಿಲ್ಲೆಯಲ್ಲೂ ಈವರೆಗೆ ವರುಣ ಕೃಪೆ ತೋರಿಲ್ಲ. ಹೀಗಾಗಿ ಜಿಲ್ಲೆಯ ಜನರು ಸಹ ವರುಣ ದೇವನನ್ನು ಒಲಿಸಿಕೊಳ್ಳಲು ಪೂಜೆ, ಹೋಮ-ಹವನದ ಮೊರೆ ಹೋಗಿದ್ದಾರೆ.

By

Published : Jul 5, 2019, 9:02 PM IST

ಮಳೆರಾಯನನ್ನ ಒಲಿಸಿಕೊಳ್ಳಲು ಕೊಡಗಿನಲ್ಲಿ ಪರ್ಜನ್ಯ ಪೂಜೆ

ಮಡಿಕೇರಿ: ಜೂನ್ ಕಳೆದರೂ ಅದೇಕೋ ಮಳೆರಾಯ ಈ ಬಾರಿ ಕೊಡಗಿನ ಕಡೆ ಮುಖ ಮಾಡಿಲ್ಲ. ಹೀಗಾಗಿ ಇಲ್ಲಿನ ಜನ ಪೂಜೆ, ಹೋಮ- ಹವನಗಳಲ್ಲಿ ತೊಡಗಿದ್ದಾರೆ.

ಮಳೆರಾಯನನ್ನ ಒಲಿಸಿಕೊಳ್ಳಲು ಕೊಡಗಿನಲ್ಲಿ ಪರ್ಜನ್ಯ ಪೂಜೆ

ಜಿಲ್ಲೆಯ ಕುಶಾಲನಗರದ ಸೋಮೇಶ್ವರ ದೇವಾಲಯದಲ್ಲಿ ಕುಶಲ ಅರ್ಚಕರ ಸಂಘದಿಂದ ವತಿಯಿಂದ ಮಳೆಗಾಗಿ ಪರ್ಜನ್ಯ ಪೂಜೆ ಮಾಡಲಾಯ್ತು. ದೊಡ್ಡ ಹೋಮ ಕುಂಡದ ಮುಂಭಾಗ ಕುಳಿತು ಅರ್ಚಕರು ಮಂತ್ರ ಪಠಣೆ ಮಾಡಿ ಎಣ್ಣೆ, ಎಳ್ಳು-ಬೆಲ್ಲ, ಹಣ್ಣು‌, ಅರಿಶಿಣ-ಕುಂಕುಮ, ಹಣ್ಣುಗಳನ್ನು ಹೋಮ ಕುಂಡಕ್ಕೆ ಹಾಕಿ ಕೊಡಗಿಗೆ ಉತ್ತಮ ಮಳೆ ಬರಲಿ ಎಂದು ವರುಣ ದೇವನನ್ನು ಒಲಿಸಿಕೊಳ್ಳಲಿ ಹೋಮ -ಹವನ ನೆರವೇರಿಸಿದ್ರು.

ಕೊಡಗಿಗೆ ವಾಡಿಕೆಯಷ್ಟು ಮಳೆಯಾಗದಿರುವುದಕ್ಕೆ ವರುಣ ದೇವನ‌ ಮುನಿಸೇ ಕಾರಣ ಅಂತ ನಂಬಿರೋ ಇಲ್ಲಿನ ಜನ ಜಿಲ್ಲೆಯ ದೇವಾಲಯಗಳಲ್ಲಿ ಮಳೆರಾಯನಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಕಳೆದ ವರ್ಷ ಅತೀವೃಷ್ಟಿಯಿಂದ ನಲುಗಿದ್ದ ಜನತೆ ಈ ವರ್ಷ ಅನಾವೃಷ್ಟಿಗೆ ತುತ್ತಾಗಿರುವುದು ವಿಪರ್ಯಾಸ.

ABOUT THE AUTHOR

...view details