ಕೊಡಗು :ಕುಶಾಲನಗರದಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.
ಸುಂದರನಗರದ ಆರ್.ಮಂಜು, ಮಣಿ, ಬಸವೇಶ್ವರ ಬಡಾವಣೆಯ ಕುಬೇರ, ಬೈಚನಹಳ್ಳಿ ನಿವಾಸಿ ಕೆ.ಆರ್.ರವಿ, ಮೈಸೂರು ಜಿಲ್ಲೆ ರಿಜ್ವಾನ್ ಅಹಮ್ಮದ್ ಬಂಧಿತ ಆರೋಪಿಗಳು. ಬಂಧಿತರಿಂದ ಎಲೆಕ್ಟ್ರಾನಿಕ್ಸ್ ಡಿಟೋನೇಟರ್, ನಾನ್ ಎಲೆಕ್ಟ್ರಾನಿಕ್ ಡಿಟೋನೇಟರ್, ಅಲ್ಯುಮಿನಿಯಂ ನೈಟ್ರೇಟ್, ಕ್ಯಾಲ್ಸಿಯಂ ಹೈಡ್ರಾಕ್ಸೈಡ್, ಸೇಫ್ಟಿ ಫ್ಯೂಸ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.