ಕರ್ನಾಟಕ

karnataka

ETV Bharat / state

ಶ್ರೀ ಸಾಮಾನ್ಯರಂತೆ ದೇಗುಲದ ಆವರಣದಲ್ಲಿ ಮಲಗಿ ಮಾತಾ ಮಾಣಿಕೇಶ್ವರಿ ದರ್ಶನ ಪಡೆದ ರಾಮುಲು

ಸೇಡಂ ತಾಲೂಕಿನ ಯಾನಾಗುಂದಿ ಮಾಣಿಕ್ಯ ಗಿರಿ ಆಶ್ರಮದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಜನ ಸಾಮಾನ್ಯರಂತೆ ಒಂದು ರಾತ್ರಿ ಅಲ್ಲೇ ತಂಗಿದ್ದು, ಬೆಳಗ್ಗೆ ಮಾತಾ ಮಾಣಿಕೇಶ್ವರಿಯ ದರ್ಶನ ಪಡೆದಿದ್ದಾರೆ.

By

Published : Feb 26, 2020, 3:15 PM IST

Sri Ramulu
ಶ್ರೀರಾಮುಲು

ಕಲಬುರಗಿ:ಸೇಡಂ ತಾಲೂಕಿನ ಯಾನಾಗುಂದಿ ಮಾಣಿಕ್ಯ ಗಿರಿ ಆಶ್ರಮದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಜನ ಸಾಮಾನ್ಯರಂತೆ ಒಂದು ರಾತ್ರಿ ಅಲ್ಲೇ ತಂಗಿದ್ದು, ಬೆಳಗ್ಗೆ ಮಾತಾ ಮಾಣಿಕೇಶ್ವರಿಯ ದರ್ಶನ ಪಡೆದಿದ್ದಾರೆ.

ಮಾತಾ ಮಾಣಿಕೇಶ್ವರಿಯ ದರ್ಶನ ಪಡೆದ ಶ್ರೀರಾಮುಲು

ಮಂಗಳವಾರ ರಾತ್ರಿ 11ಕ್ಕೆ ಯಾನಗುಂದಿಯ ಮಾಣಿಕ್ಯಗಿರಿಗೆ ಬಂದು ತಂಗಿದ್ದ ಶ್ರೀರಾಮುಲು, ಕಂಬಳಿ ಹೊದ್ಕೊಂಡು ಜನ ಸಾಮಾನ್ಯರಂತೆ ಆವರಣದಲ್ಲಿ ಮಲಗಿದ್ದಾರೆ. ಬುಧವಾರ ಬೆಳಗ್ಗೆ ಆಶ್ರಮದಲ್ಲಿ ಒಂದು ಗಂಟೆಗಳ ಕಾಲ ಪೂಜೆ ನೆರವೇರಿಸಿ, ನಂತರ ಮಾತಾ ಮಾಣಿಕೇಶ್ವರಿ ದರ್ಶನ ಪಡೆದಿದ್ದಾರೆ‌.

ಸಚಿವನಾದ ಮೇಲೆ ಬರುವುದಾಗಿ ಹರಕೆ ಇತ್ತು ಈ ಹಿನ್ನಲೆ ಹಾಗೂ ಮಗಳ ಮದುವೆಗೆ ಅಮ್ಮನವರ ಆಶೀರ್ವಾದ ಪಡೆಯಲು ಬಂದಿರುವುದಾಗಿ ತಿಳಿಸಿದರು.

ABOUT THE AUTHOR

...view details