ಕರ್ನಾಟಕ

karnataka

By

Published : Jun 18, 2019, 12:47 AM IST

ETV Bharat / state

ಕಲಬುರಗಿ ಜಿಲ್ಲೆಯಲ್ಲಿ ಸಂಭ್ರಮದ ಕಾರಹುಣ್ಣಿಮೆ ಆಚರಣೆ

ಜಿಲ್ಲೆಯ ಮರತೂರು, ಸೇರಿದಂತೆ ಹಲವೆಡೆ ಹಬ್ಬದ ಸಂಭ್ರಮ ಮುಗಿಲು ಮುಟ್ಟಿತ್ತು. ಎತ್ತುಗಳನ್ನು ವಿಶೇಷವಾಗಿ ಶೃಂಗಾರಗೊಳಿಸಿ, ಅವುಗಳಿಗೆ ಪೂಜೆ ಸಲ್ಲಿಸಿ ಮನೆಗಳಲ್ಲಿ ಹೋಳಿಗೆ ಊಟ ಸವಿದ ರೈತರು, ವಿಶೇಷವಾಗಿ ಅಲಂಕರಿಸಿದ ಎತ್ತುಗಳ ಜೊತೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ.

ಕಾರಹುಣ್ಣಿಮೆ ಆಚರಣೆ

ಕಲಬುರಗಿ: ರೈತರ ವಿಶೇಷ ಹಬ್ಬವಾದ ಎತ್ತುಗಳ ಹಬ್ಬ ಕಾರಹುಣ್ಣಿಮೆಯನ್ನು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ.

ಕಾರಹುಣ್ಣಿಮೆ ಪ್ರಯುಕ್ತ ಎತ್ತುಗಳ ಓಟದ ಸ್ಪರ್ಧೆ

ಮುಂಗಾರು ಬಿತ್ತನೆಗೂ ಮುನ್ನಾ ಬರುವ ಹುಣ್ಣಿಮೆಯ ದಿನದಂದು ಎತ್ತುಗಳನ್ನು ವಿವಿಧ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿ, ನಂತರ ಅವುಗಳಿಗೆ ಪೂಜೆ ಸಲ್ಲಿಸಿ, ಹೋಳಿಗೆ ನೈವೇದ್ಯ ಅರ್ಪಿಸುತ್ತಾರೆ. ಜೀವನಾಧಾರವಾಗಿರುವ ಎತ್ತುಗಳಿಗೆ ಗೌರವ ಅರ್ಪಿಸಿದ ನಂತರ ಅವುಗಳ ಓಟದ ಸ್ಪರ್ಧೆ ನಡೆಯುತ್ತದೆ. ಕೆಲವೆಡೆ ಬರೀ ಎತ್ತುಗಳನ್ನು ಕರಿಹರಿಸಿದರೆ, ಮತ್ತೆ ಕೆಲವೆಡೆ ಎತ್ತಿನ ಚಕ್ಕಡಿಯೊಂದಿಗೆ ಕರಿ ಹರಿಸಲಾಗುತ್ತದೆ. ಈ ಹಬ್ಬದಲ್ಲಿ ರೈತನ ಅವಿಭಾಜ್ಯ ಅಂಗಗಳಾಗಿರುವ ಎತ್ತುಗಳ ಕರಿಹರಿಸುವ ಮೂಲಕ ಅವುಗಳಿಗೆ ಗೌರವ ಸಲ್ಲಿಸಲಾಗುತ್ತದೆ.

For All Latest Updates

TAGGED:

ABOUT THE AUTHOR

...view details