ಕರ್ನಾಟಕ

karnataka

Unlock​: ಕಲಬುರಗಿಯಲ್ಲಿ ಸ್ವಚ್ಛಗೊಂಡ ಹೋಟೆಲ್​ಗಳು, ನಾಳೆಯಿಂದ ಬಸ್​ ಸಂಚಾರ ಪುನಾರಂಭ

ರಾಜ್ಯದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಕಡಿಮೆಯಾದ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಅನ್​ಲಾಕ್​ ಘೋಷಣೆಯಾಗಿದೆ. ಈ ನಡುವೆ ಕಲಬುರಗಿ ಜಿಲ್ಲೆಯಲ್ಲಿ ನಾಳೆಯಿಂದ ನಿಯಮ ಸಡಿಲಿಕೆಯಾಗುತ್ತಿದ್ದು, ಸಾರಿಗೆ ಸಂಚಾರ ಸೇರಿದಂತೆ ಹಲವು ಸೇವೆಗಳು ಜನರಿಗೆ ಲಭ್ಯವಾಗಲಿವೆ.

By

Published : Jun 20, 2021, 4:54 PM IST

Published : Jun 20, 2021, 4:54 PM IST

kalburgi
ಕಲಬುರಗಿ ಅನ್​ಲಾಕ್​

ಕಲಬುರಗಿ:ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದಲೂ ಕೊರೊನಾ ಅಟ್ಟಹಾಸ ಮರೆದಿತ್ತು. ಈ ಹಿನ್ನೆಲೆ ಲಾಕ್​​ಡೌನ್ ಜಾರಿಯಾಗಿ ಕಠಿಣ ನಿರ್ಬಂಧಗಳ ನಡುವೆ ಇದೀಗ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ನಾಳೆಯಿಂದ ಜಿಲ್ಲೆಯಲ್ಲಿ ಅನ್​ಲಾಕ್​ ಪ್ರಕ್ರಿಯೆ ಜಾರಿಯಾಗಲಿದೆ.

ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಂಕಿಯಿಂದ ಎರಡಂಕಿಗೆ ಇಳಿಮುಖವಾಗಿದೆ. ಈ ಹಿಂದೆ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ತಲುಪಿತ್ತು, ಈಗ ನಿತ್ಯ 20ರ ಆಸುಪಾಸಿನಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, ಈ ಹಿಂದೆ ನಿತ್ಯ 20 ಮಂದಿ ಸೋಂಕಿತರು ಸಾವನ್ನಪ್ಪುತ್ತಿದ್ದರು. ಆದರೆ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಸಾವಿನ ಪ್ರಕರಣ ದಾಖಲಾಗಿಲ್ಲ.

ಕಲಬುರಗಿಯಲ್ಲಿ ನಾಳೆಯಿಂದ ಕೋವಿಡ್ ನಿಯಮ ಸಡಿಲಿಕೆ

ಈ ಹಿನ್ನೆಲೆ ನಾಳೆಯಿಂದ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಪಂಜರದ ಗಿಳಿಯಂತಾಗಿದ್ದ ಜನರಿಗೆ ಮುಕ್ತಿ ಸಿಕ್ಕಂತಾಗುತ್ತದೆ.

ನಾಳೆಯಿಂದ ಜಿಲ್ಲೆಯಲ್ಲಿ 200 ಬಸ್ ಸಂಚಾರ..

ಅನ್​​​ಲಾಕ್ ಹಿನ್ನೆಲೆ ನಾಳೆಯಿಂದ ಕಲಬುರಗಿಯಲ್ಲಿ ಶೇ.50ರಷ್ಟು ಸಾರಿಗೆ ಸಂಚಾರ ಆರಂಭಿಸುವುದು ಖಚಿತವಾಗಿದೆ. ಜಿಲ್ಲೆಯಿಂದ ಸುಮಾರು 200 ಬಸ್​ಗಳ ಸಂಚಾರ ಪ್ರಾರಂಭವಾಗಲಿದೆ. ಗ್ರಾಮಗಳು, ತಾಲೂಕುಗಳಿಗೆ, ಹಾಗೂ ಅನ್ಯ ಜಿಲ್ಲೆಗಳಿಗೆ ಬಸ್ ಸಂಚಾರ ಮಾಡಲಿವೆ. ಅಂತರ ಕಾಯ್ದುಕೊಂಡು ಪ್ರಯಾಣಿಕರು ಸಂಚಾರ ಮಾಡಬಹುದಾಗಿದೆ. ಈಗಾಗಲೇ ಸೇವೆಗೆ ಹಾಜರಾಗುವ ಚಾಲಕ, ಹಾಗೂ ನಿರ್ವಾಹಕರಿಗೆ RTPCR ರಿಪೋರ್ಟ್ ಕಡ್ಡಾಯಗೊಳಿಸಲಾಗಿದ್ದು, ನೆಗೆಟಿವ್ ಇದ್ದವರಿಗೆ ಸೋಮವಾರ ಸೇವೆಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಈಗಾಗಲೇ ಬಸ್ ಹಾಗೂ ಬಸ್ ನಿಲ್ದಾಣ ಸ್ವಚ್ಛ ಮಾಡಲಾಗುತ್ತಿದೆ.

ಬಾರ್, ರೆಸ್ಟೋರೆಂಟ್​​​ಗಳಿಗೆ ಪಾರ್ಸಲ್​ಗೆ ಮಾತ್ರ ಅವಕಾಶ..

ನಾಳೆಯಿಂದ ವಾಣಿಜ್ಯ ವಹಿವಾಟಿಗೆ ಸರ್ಕಾರ ಅನುಮತಿ ನೀಡಿದೆ. ಅಂಗಡಿ ಮುಂಗಟ್ಟುಗಳು ತೆರೆಯಲಿವೆ. ಆದರೆ ಮದ್ಯದಂಗಡಿಗೆ ಪಾರ್ಸೆಲ್​ಗೆ ಮಾತ್ರ ಅನುಮತಿ ಮಾತ್ರ ಇದ್ದು, ಬಾರ್ ರೆಸ್ಟೋರೆಂಟ್‌ಗಳಿಗೆ ಅವಕಾಶ ನೀಡುವಂತೆ ಮಾಲೀಕರು ಮನವಿ ಮಾಡುತ್ತಿದ್ದಾರೆ. ಶೇ.50ರಷ್ಟು ಗ್ರಾಹಕರಿಗೆ ಅವಕಾಶ ಕಲ್ಪಸಿ ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡುವಂತೆ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಶಿಯೇಶನ್ ಕಾರ್ಯದರ್ಶಿ ವೆಂಕಟೇಶ್ ಕಡೆಚೊರು ಮನವಿ ಮಾಡಿದ್ದಾರೆ.

ಹೋಟೆಲ್ ಸ್ವಚ್ಛತೆ

ಸೋಮವಾರದಿಂದ ಹೋಟೆಲ್ ಉದ್ಯಮಕ್ಕೆ ಆಕಾಶ ಕಲ್ಪಿಸಿದ ಹಿನ್ನೆಲೆ ಇಂದಿನಿಂದಲೇ ಹೋಟೆಲ್‌ಗಳ ಸ್ವಚ್ಛತೆ ಕಾರ್ಯ ಪ್ರಾರಂಭಗೊಂಡಿದೆ. ಸರ್ಕಾರದ ನಿರ್ದೇಶನದಂತೆ ಹೋಟೆಲ್ ವಹಿವಾಟು ಪ್ರಾರಂಭಗೊಳ್ಳಲಿದೆ. ಹೀಗಾಗಿ ತಿಂಗಳಿಂದ ಬಾಗಿಲು ಹಾಕಿದ್ದ ಉದ್ಯಮಿಗಳು ಸ್ವಚ್ಛತಾ ಮಾಡಿಸುವಲ್ಲಿ ನಿರತರಾಗಿದ್ದಾರೆ.

ಉದಾ:ಗಾಂಜಾ ಸಾಗಾಟ: ಅಂತಾರಾಜ್ಯ ಗ್ಯಾಂಗ್‍ನ ಇಬ್ಬರು ಆರೋಪಿಗಳ ಬಂಧನ

ABOUT THE AUTHOR

...view details