ಕರ್ನಾಟಕ

karnataka

ETV Bharat / state

ಮಾಜಿ ಸಚಿವ ಮನೋಹರ್​ ತಹಶೀಲ್ದಾರ್ ಜೆಡಿಎಸ್‌ ಸೇರ್ಪಡೆ​; ಟಿಕೆಟ್‌ ನೀಡದ ಕಾಂಗ್ರೆಸ್ ನೆನೆದು ಕಣ್ಣೀರು

ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಇಂದು ಜೆಡಿಎಸ್​ ಸೇರ್ಪಡೆಯಾದರು.

By

Published : Apr 7, 2023, 6:53 PM IST

Updated : Apr 7, 2023, 7:22 PM IST

Former Minister Manohar Tehsildar
ಮಾಜಿ ಸಚಿವ ಮನೋಹರ್​ ತಹಶೀಲ್ದಾರ್​

ಮಾಜಿ ಸಚಿವ ಮನೋಹರ್​ ತಹಶೀಲ್ದಾರ್​

ಹಾವೇರಿ:ಕಾಂಗ್ರೆಸ್‌ ನಾಯಕ ಮನೋಹರ್ ತಹಶೀಲ್ದಾರ್ ಅವರಿಂದು ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ್ದಾರೆ. ಈ ಸಂದರ್ಭದಲ್ಲಿ ಅವರು ವೇದಿಕೆ ಮೇಲೆ ಕಣ್ಣೀರು ಸುರಿಸಿದ ಪ್ರಸಂಗವೂ ನಡೆಯಿತು. ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಹಾನಗಲ್ ಪಟ್ಟಣದಲ್ಲಿ ಏರ್ಪಡಿಸಲಾಗಿತ್ತು.

"ಕಾಂಗ್ರೆಸ್ ಪಕ್ಷ ನನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. 50 ವರ್ಷ ಪಕ್ಷಕ್ಕಾಗಿ ದುಡಿದ ನನಗೆ ಟಿಕೆಟ್ ನೀಡಲಿಲ್ಲ. 2012 ರಲ್ಲಿ ಹಾಲಿ ಶಾಸಕನಾಗಿದ್ದ ನನಗೆ ಟಿಕೆಟ್ ನೀಡದೆ‌ ಶ್ರೀನಿವಾಸ ಮಾನೆಗೆ ಟಿಕೆಟ್ ಕೊಟ್ಟರು. ನಂತರ ಎಂಎಲ್ಸಿ ಮಾಡುವುದಾಗಿ ತಿಳಿಸಿದ್ದ ನಾಯಕರು ಮಾತನಾಡಿಸುವ ಸೌಜನ್ಯವನ್ನೂ ತೋರಿಸಲಿಲ್ಲ. ಈ ಬಾರಿ ನನಗೆ ಕೊನೆಯ ಅವಕಾಶ ಕಲ್ಪಿಸಿ ಎಂದರೂ ಟಿಕೆಟ್ ನೀಡಲಿಲ್ಲ" ಎಂದು‌ ಮನೋಹರ್ ತಹಶೀಲ್ದಾರ್ ಕಣ್ಣೀರು ಹಾಕಿದರು.

ಹಾನಗಲ್​ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ್​ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪಕ್ಷ ತೊರೆದು ಜೆಡಿಎಸ್​ ಪಕ್ಷವನ್ನು ಏಪ್ರಿಲ್​ 1 ರಂದು ಸೇರ್ಪಡೆಯಾಗಿದ್ದರು."ಕಳೆದ ಐವತ್ತು ವರ್ಷಗಳಿಂದ ನಾನು ಕಾಂಗ್ರೆಸ್​ ಪಕ್ಷಕ್ಕಾಗಿ ದುಡಿದಿದ್ದೇನೆ. ಕಾಂಗ್ರೆಸ್​ ಪಕ್ಷ ನನಗೆ ತಾಯಿಯಂತಿತ್ತು. ಆದರೆ ಪಕ್ಷವನ್ನು ತಾಯಿಯಂತೆ ನೋಡಿಕೊಂಡ ನನಗೆ ಕಾಂಗ್ರೆಸ್​ ದ್ರೋಹ ಮಾಡಿದೆ. ಇದುವರೆಗೆ ಮಾಡಿದ ಕಾರ್ಯಕ್ಕೆ ಮನ್ನಣೆ ಸಿಗದ ಜಾಗದಲ್ಲಿ ನಾನು ಇರೋದಿಲ್ಲ. ಇನ್ನೆಂದೂ ನಾನು ಕಾಂಗ್ರೆಸ್​ ಕಡೆ ಮುಖ ಮಾಡೋದಿಲ್ಲ" ಎಂದು ಜೆಡಿಎಸ್​ ಪಕ್ಷಕ್ಕೆ ಸೇರ್ಪಡೆಗೊಂಡಾಗ ಹೇಳಿದ್ದರು.

"ಐದು ದಶಕಗಳ ಕಾಲ ಕಾಂಗ್ರೆಸ್​ಗಾಗಿ ದುಡಿದ ನನಗೆ ಕಾಂಗ್ರೆಸ್​ ಹೈಕಮಾಂಡ್​ ದ್ರೋಹ ಮಾಡಿದೆ. 20 ವರ್ಷ ಶಾಸಕನಾಗಿ, ವಿಧಾನಸಭೆ ಉಪಸಭಾಪತಿಯಾಗಿ, ಸಚಿವನಾಗಿ ಸೇವೆ ಸಲ್ಲಿಸಿದ್ದೆ. 2018ರಲ್ಲಿ ನಾನು ಶಾಸಕನಾಗಿದ್ದರೂ ಶ್ರೀನಿವಾಸ್​ ಮಾನೆಗೆ ಕಾಂಗ್ರೆಸ್​ ಟಿಕೆಟ್​ ನೀಡಿತ್ತು. ಪರವಾಗಿಲ್ಲ ಎಂದು ಆಗ ಆದ ಬೇಜಾರನ್ನು ಮರೆತು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದೆ. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಾದರೂ ಟಿಕೆಟ್​ ನೀಡಿ ಎಂದು ದೆಹಲಿಗೆ ಹೋಗಿ ಹೈಕಮಾಂಡ್​ಗೆ ಮನವಿ ಸಲ್ಲಿಸಿದ್ದೆ."

"ಸ್ವತಃ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೆ. ಮೊದಲ ಪಟ್ಟಿ ಬಿಡುಗಡೆ ಮಾಡಿದಾಗ ಹಾನಗಲ್​ ವಿಧಾನಸಭಾ ಕ್ಷೇತ್ರಕ್ಕೆ ಶ್ರೀನಿವಾಸ್​ ಮಾನೆ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ನನ್ನ ಮನವಿಗೆ ಕಿಂಚಿತ್ತೂ ಮನ್ನಣೆ ನೀಡಿಲ್ಲ. ಕನಿಷ್ಠ ಪಕ್ಷ ಹಾನಗಲ್​ಗೆ ಶ್ರೀನಿವಾಸ್​ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ ನಂತರ, ನನ್ನನ್ನು ಸೌಜನ್ಯಕ್ಕೂ ಕಾಂಗ್ರೆಸ್​ ಮುಖಂಡರು ನನ್ನನ್ನು ಸಂಪರ್ಕಿಸಿ, ಮಾತನಾಡಿಸಿಲ್ಲ. ಕಾಂಗ್ರೆಸ್​ನ ಈ ಧೋರಣೆಯಿಂದ ನನಗೆ ಅಪಮಾನ, ಬೇಜಾರಾಗಿದೆ. ಇನ್ನು ಕಾಂಗ್ರೆಸ್​ನ ಸಹವಾಸವೇ ಬೇಡ ಎಂದು ಪಕ್ಷವನ್ನು ತ್ಯಜಿಸಿ, ಜೆಡಿಎಸ್​ ಸೇರಿಕೊಂಡಿದ್ದೇನೆ" ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ:ಸಿಗದ ಕಾಂಗ್ರೆಸ್‌ ಟಿಕೆಟ್‌; ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾದ ಹರಪಳ್ಳಿ ರವೀಂದ್ರ

Last Updated : Apr 7, 2023, 7:22 PM IST

ABOUT THE AUTHOR

...view details