ಕರ್ನಾಟಕ

karnataka

ETV Bharat / state

Airport ರೇವಣ್ಣನವರದ್ದಲ್ಲ, ಅದು ಹಾಸನದ ಆಸ್ತಿ: ಶಾಸಕ ಪ್ರೀತಂ ಗೌಡ

Airport​ ಅಂದರೆ ಅದು ಕೇವಲ ಹೆಚ್​ ಡಿ ರೇವಣ್ಣ ಅವರೊಬ್ಬರಿಗೇ ಸೀಮಿತವಲ್ಲ. ಅವರು ಒಕ್ಕಣೆ ಮಾಡುವ ಕಣವೂ ಅಲ್ಲ. ಇದು ಹಾಸನ ಜಿಲ್ಲೆಯ ಜನರ ಆಸ್ತಿ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಶಾಸಕ ಪ್ರೀತಂ.ಜೆ ಗೌಡ ವಾಗ್ದಾಳಿ ನಡೆಸಿದರು.

By

Published : Jul 19, 2021, 12:29 PM IST

preetham
ಶಾಸಕ ಪ್ರೀತಂ.ಜೆ ಗೌಡ

ಹಾಸನ:ಹಾಸನ ವಿಮಾನ ನಿಲ್ದಾಣ ಮಾಜಿ ಸಚಿವ ಹೆಚ್​ ಡಿ ರೇವಣ್ಣನವರದ್ದಲ್ಲ. ಅವರ ಕುಟುಂಬದ ಒಕ್ಕಣೆ ಮಾಡುವ ಕಣವೂ ಅಲ್ಲ. ಇದು ಹಾಸನದ ಆಸ್ತಿ. ತಜ್ಞರು ಏನು ಹೇಳುತ್ತಾರೋ ಅದನ್ನು ಮಾಡುತ್ತೇವೆ ಎಂದು ಹೆಚ್.ಡಿ ರೇವಣ್ಣ ವಿರುದ್ಧ ಶಾಸಕ ಪ್ರೀತಂ.ಜೆ ಗೌಡ ವಾಗ್ದಾಳಿ ನಡೆಸಿದರು.

ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಇಂದು ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನದ ಏರ್​ಪೋರ್ಟ್​ ಅಂದ್ರೆ ಅದು ಕೇವಲ ರೇವಣ್ಣ ಅವರಿಗೆ ಮಾತ್ರ ಸೀಮಿತವಲ್ಲ. ಅವರು ಒಕ್ಕಣೆ ಮಾಡುವ ಕಣವೂ ಅಲ್ಲ. ಇದು ಹಾಸನ ಜನರ ಆಸ್ತಿ. ಹಿರಿಯರಾದ ಹೆಚ್​ ಡಿ ದೇವೇಗೌಡರು ಸಿಎಂಗೆ ಮನವಿ ಮಾಡಿದ್ದರು. ಅವರ ನಿರ್ಧಾರದಂತೆ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದಾರೆ ಎಂದರು.

ಒಂದು ಬಾರಿ ಪ್ರಧಾನಿ, ಮೂರು ಬಾರಿ ಸಿಎಂ ಆದ ಕುಟುಂಬದವರು ಯಾಕೆ ಏರ್​ಪೋರ್ಟ್​ ಮಾಡಲಿಲ್ಲ? ಅಧಿಕಾರ ಇದ್ದಾಗ ಮಾಡಲಿಲ್ಲ. ಈಗ ಆ ರೀತಿ ಮಾಡಬೇಕು ಈ ರೀತಿ ಮಾಡಬೇಕು ಎಂದರೆ ಹೇಗೆ? ರೇವಣ್ಣನವರು ಮಾತನಾಡುವುದಾದರೆ 20 ಸಾವಿರ ಜನ ಸೇರಿಸಿ ಮಾತನಾಡಲಿ. ಆಮೇಲೆ ನಾನು ಮಾತನಾಡುತ್ತೇನೆ ಎಂದು ಶಾಸಕ ಪ್ರೀತಂ ಗೌಡ ಸವಾಲು ಹಾಕಿದರು.

ABOUT THE AUTHOR

...view details