ಕರ್ನಾಟಕ

karnataka

ETV Bharat / state

ಲಂಚ ಸ್ವೀಕಾರ ವೇಳೆ ಎಸಿಬಿ ಬಲೆಗೆ ಬಿದ್ದ ಪಿಡಿಒ!

2ನೇ ಕಂತಿನ ಹಣವಾಗಿ ಐದು ಸಾವಿರ ರೂಪಾಯಿಗಳನ್ನು ಪಡೆಯುವ ವೇಳೆ ಎಸಿಬಿ ಡಿವೈಎಸ್ಪಿ ಕೃಷ್ಣಮೂರ್ತಿ ಮತ್ತು ಇನ್ಸ್​ಪೆಕ್ಟರ್ ಜಗದೀಶ್ ಹಾಗೂ ಭರತ್ ನೇತೃತ್ವದ ತಂಡ ದಾಳಿ ನಡೆಸಿ ಅಧಿಕಾರಿಯನ್ನು ಬಲೆಗೆ ಬೀಳಿಸಿದ್ದಾರೆ..

By

Published : Feb 10, 2021, 3:22 PM IST

rangaswamy
ರಂಗಸ್ವಾಮಿ

ಹಾಸನ :ಆಶ್ರಯ ಮನೆ ನೀಡುವುದಾಗಿ ಲಂಚ ಸ್ವೀಕಾರ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಪಿಡಿಒವೊಬ್ಬರು ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.

ರಂಗಸ್ವಾಮಿ ಎಸಿಬಿ ಬಲೆಗೆ ಬಿದ್ದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ. ಎಂಟು ಸಾವಿರಕ್ಕೆ ಬೇಡಿಕೆಯಿಟ್ಟು 2ನೇ ಕಂತಿನ ಹಣವಾಗಿ ₹5000 ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾನೆ.

ಆಲೂರು ತಾಲೂಕಿನ ಕಣತೂರು ಗ್ರಾಪಂನಲ್ಲಿ ಈ ಘಟನೆ ನಡೆದಿದೆ. ಕಣತೂರು ಗ್ರಾಮದ ರವಿ ಎಂಬುವರು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ವಸತಿ ನಿವೇಶನವನ್ನು ಮಂಜೂರಾತಿ ಮಾಡಲು ಎಂಟು ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ರಂಗಸ್ವಾಮಿ, ಮೊದಲ ಕಂತಿನಲ್ಲಿ ₹3000 ಲಂಚ ಸ್ವೀಕಾರ ಮಾಡಿದ್ದ.

2ನೇ ಕಂತಿನ ಹಣವಾಗಿ ಐದು ಸಾವಿರ ರೂಪಾಯಿಗಳನ್ನು ಪಡೆಯುವ ವೇಳೆ ಎಸಿಬಿ ಡಿವೈಎಸ್ಪಿ ಕೃಷ್ಣಮೂರ್ತಿ ಮತ್ತು ಇನ್ಸ್​ಪೆಕ್ಟರ್ ಜಗದೀಶ್ ಹಾಗೂ ಭರತ್ ನೇತೃತ್ವದ ತಂಡ ದಾಳಿ ನಡೆಸಿ ಅಧಿಕಾರಿಯನ್ನು ಬಲೆಗೆ ಬೀಳಿಸಿದ್ದಾರೆ.

ಓದಿ:ಮರಳು ಸುಲಭವಾಗಿ ಸಿಗುವಂತೆ ನಿಯಮಾವಳಿ ಸರಳೀಕರಣ; ಮುರುಗೇಶ್ ನಿರಾಣಿ

ಆರೋಪಿ ರಂಗಸ್ವಾಮಿಯನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು, ನೊಂದ ವ್ಯಕ್ತಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details