ಕರ್ನಾಟಕ

karnataka

ETV Bharat / state

ಜಗಳ ಮಾಡಿಕೊಂಡು ತವರಿಗೆ ಬಂದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ಪತಿ

ಗದಗ ಜಿಲ್ಲೆಯ ಮದಗಾನೂರು ಗ್ರಾಮದಲ್ಲಿ ಗಂಡನೇ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ನಡದಿದೆ.

By

Published : Nov 9, 2019, 6:59 PM IST

ಕೊಡಲಿಯಿಂದ ಕೊಚ್ಚಿ ಹೆಂಡತಿಯನ್ನು ಕೊಂದ ಗಂಡ

ಗದಗ:ಪತಿಯೊಬ್ಬ ತನ್ನ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆಗದಗ ಜಿಲ್ಲೆಯ ಮದಗಾನೂರು ಗ್ರಾಮದಲ್ಲಿ ನಡೆದಿದೆ.

ಕೊಡಲಿಯಿಂದ ಕೊಚ್ಚಿ ಹೆಂಡತಿಯನ್ನು ಕೊಂದ ಗಂಡ

ಶಂಕ್ರವ್ವ ಪೂಜಾರ (23) ಕೊಲೆಯಾದ ಮಹಿಳೆ. ಆಕೆಯ ಪತಿ ಈಶ್ವರಪ್ಪ ಪೂಜಾರ (40) ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈಶ್ವರಪ್ಪ , ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಸಾಪೂರ ಗ್ರಾಮದವನು. ಕಳೆದ ಒಂದು ವಾರದ ಹಿಂದಷ್ಟೇ ಶಂಕ್ರವ್ವ ಜಗಳ ಮಾಡಿಕೊಂಡು ತವರು ಮನೆಗೆ ಬಂದಿದ್ದಳೆಂದು ತಿಳಿದು ಬಂದಿದೆ.

ಕೆಲವು ದಿನಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ವ್ಯಾಜ್ಯ ಬಗೆಹರಿದಿದ್ದರೂ ಈಶ್ವರಪ್ಪ ಮಾತ್ರ ದ್ವೇಷ ಬಿಡದೆ ಈ‌ ಕೊಲೆ ಮಾಡಿದ್ದಾನೆಂದು ತಿಳಿದು ಬಂದಿದೆ.‌ ಮನೆಯಲ್ಲಿ ಯಾರೂ ಇಲ್ಲದ ಸಮಯ‌‌ ನೋಡಿಕೊಂಡು ಸಂಚು ರೂಪಿಸಿರುವ ಈಶ್ವರಪ್ಪ ಈ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಶಂಕ್ರವ್ವಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ಜರುಗಿದೆ.

ABOUT THE AUTHOR

...view details