ಕರ್ನಾಟಕ

karnataka

ETV Bharat / state

ಆಶ್ರಮ ಶಾಲೆಯನ್ನು ಕ್ವಾರಂಟೈನ್ ಮಾಡಲು ನಿರ್ಧಾರ: ಗ್ರಾಮಸ್ಥರಿಂದ ವಿರೋಧ

ಸಮಾಜ ಕಲ್ಯಾಣ ಇಲಾಖೆಯು ಆಶ್ರಮ ಶಾಲೆಯನ್ನು ಕ್ವಾರಂಟೈನ್ ಮಾಡಲು ಮುಂದಾಗಿದ್ದು, ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮಸ್ಥರು ಇಲಾಖೆಯ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

By

Published : May 24, 2020, 8:46 PM IST

Gadag  villagers' oppose
ಕ್ವಾರಂಟೈನ್ ಕೇಂದ್ರಕ್ಕೆ ಗ್ರಾಮಸ್ಥರಿಂದ ವಿರೋಧ

ಗದಗ: ಗ್ರಾಮದ ಆಶ್ರಮ ಶಾಲೆಯನ್ನು ಕ್ವಾರಂಟೈನ್ ಕೇಂದ್ರ ಮಾಡೋದಕ್ಕೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯು ಆಶ್ರಮ ಶಾಲೆಯನ್ನು ಕ್ವಾರಂಟೈನ್ ಮಾಡಲು ಮುಂದಾಗಿದ್ದು ಗ್ರಾಮಸ್ಥರು, ಶಾಲೆಯ ಗೇಟ್​ಗೆ ಮುಳ್ಳುಗಳನ್ನಿಟ್ಟು ವಿರೋಧ ವ್ಯಕ್ತಪಡಿಸಿದರು.

ಗ್ರಾಮಸ್ಥರಿಂದ ವಿರೋಧ

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಪಿ. ಬಳಿಗಾರ್ ನೇತೃತ್ವದಲ್ಲಿ ವಿರೋಧ ವ್ಯಕ್ತಪಡಿದ ಗ್ರಾಮಸ್ಥರು, ಏನೇ ಆಗಲಿ ಕ್ವಾರಂಟೈನ್ ಕೇಂದ್ರ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ABOUT THE AUTHOR

...view details