ಕರ್ನಾಟಕ

karnataka

ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ಕೊರೊನಾ ವಾರಿಯರ್ಸ್​... ಜಾಗಟೆ ಬಾರಿಸಿ ಆಕ್ರೋಶ!

ಮೇ‌ 12ರಿಂದ ಮೇ‌ 21ರವರೆಗೂ ಪ್ರತಿದಿನ ಹತ್ತು ನಿಮಿಷ ವಿಭಿನ್ನ ರೀತಿ ಪ್ರತಿಭಟನೆ ನಡೆಸುವುದಾಗಿ ಹೇಳಿರೋ ಪ್ರತಿಭಟನಾಕಾರರು, ಬೇಡಿಕೆಗಳು ಈಡೇರದಿದ್ರೆ ಮೇ‌ 22ರಿಂದ ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.

By

Published : May 13, 2020, 8:54 PM IST

Corona Warriors beat 'Jagate' Demanding the fulfillment of various demands at Gadag
'ಜಾಗಟೆ' ಬಾರಿಸಿದ ಕೊರೊನಾ ವಾರಿಯರ್ಸ್

ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೊರೊನಾ ವಾರಿಯರ್ಸ್​ಗಳಿಂದ ಜಿಲ್ಲೆಯಲ್ಲಿ ತಮಟೆ ಬಾರಿಸಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ಮುಂಡರಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸೇವಾ ಭದ್ರತೆ, ನೌಕರಿ ಕಾಯಂಗೊಳಿಸುವುದು ಸೇರಿದಂತೆ ಇತರ ಬೇಡಿಕೆಗಳಿಗೆ ಒತ್ತಾಯಿಸಿ, ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ‌ ಸಂಘದ ಸದಸ್ಯರು ಜಾಗಟೆ ಬಾರಿಸೋ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ವಾರಿಯರ್ಸ್

ಮೇ‌ 12ರಿಂದ ಮೇ‌ 21ರವರೆಗೂ ಪ್ರತಿದಿನ ಹತ್ತು ನಿಮಿಷ ವಿಭಿನ್ನ ರೀತಿ ಪ್ರತಿಭಟನೆ ನಡೆಸುವುದಾಗಿ ಹೇಳಿರೋ ಪ್ರತಿಭಟನಾಕಾರರು, ಬೇಡಿಕೆಗಳು ಈಡೇರದಿದ್ರೆ ಮೇ‌ 22ರಿಂದ ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details