ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಯೆಸ್ ಬ್ಯಾಂಕ್ ಖಾತೆ ಹೊಂದಿದೆ. ಸದ್ಯ ಯೆಸ್ ಬ್ಯಾಂಕ್ ತಾಂತ್ರಿಕ ದೋಷ ಅನುಭವಿಸುತ್ತಿರುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ತೆರಿಗೆ ಹಾಗೂ ಕರಗಳನ್ನು ಯೆಸ್ ಬ್ಯಾಂಕ್ನಲ್ಲಿ ಕಟ್ಟದಂತೆ ಪಾಲಿಕೆ ಅಯುಕ್ತ ಸುರೇಶ್ ಇಟ್ನಾಳ್ ಆದೇಶ ಹೊರಡಿಸಿದ್ದಾರೆ.
HDMCಗೂ ತಟ್ಟಿದ 'ಯೆಸ್' ಬ್ಯಾಂಕ್ ಆರ್ಥಿಕ ಮುಗ್ಗಟ್ಟಿನ ಎಫೆಕ್ಟ್!
ಸಾರ್ವಜನಿಕರು ಈವರೆಗೂ ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ, ನೀರಿನ ಬಿಲ್ ಎಲ್ಲವನ್ನೂ ಯೆಸ್ ಬ್ಯಾಂಕ್ ಮೂಲಕವೇ ಪಾವತಿಸುತ್ತಿದ್ದರು. ಆದರೆ, ಈಗ ಯೆಸ್ ಬ್ಯಾಂಕ್ ವ್ಯವಹಾರ ಸ್ಥಗಿತಗೊಂಡಿರೋದ್ರಿಂದ ಪಾಲಿಕೆ ಜತೆಗೆ ಕರದಾತರು ಸಹ ತೊಂದರೆ ಅನುಭವಿಸ್ತಿದ್ದಾರೆ.
ಮಹಾನಗರ ಪಾಲಿಕೆ
ಸಾರ್ವಜನಿಕರು ಈವರೆಗೂ ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ, ನೀರಿನ ಬಿಲ್ ಎಲ್ಲವನ್ನೂ ಯೆಸ್ ಬ್ಯಾಂಕ್ ಮೂಲಕ ವ್ಯವಹಾರ ನಡೆಸುತ್ತಿದ್ದರು. ತಾತ್ಕಾಲಿವಾಗಿ ತಾಂತ್ರಿಕ ದೋಷದಿಂದಾಗಿ ಯೆಸ್ ಬ್ಯಾಂಕಿನ ವ್ಯವಹಾರ ಸ್ಥಗಿತಗೊಳಿಸಿದೆ ಎಂದು ಉಲ್ಲೇಖಿಸಿ ಪ್ರಕಟಣೆ ಹೊರಡಿಸಿದ್ದಾರೆ.