ಕರ್ನಾಟಕ

karnataka

ETV Bharat / state

ಓದಲು ಬಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ರೌಡಿ ಬ್ರದರ್ಸ್.. ವಿದ್ಯಾಗಿರಿಯಲ್ಲಿ ಪುಂಡರಿಗಿಲ್ವಾ ಬ್ರೇಕ್?

ಧಾರವಾಡ ಓದಿಗೆ, ಕಲೆ, ಸಾಹಿತ್ಯಕ್ಕೆ ಹೆಸರು ಮಾಡಿದೆ. ಆದರೆ, ಈಗೀಗ ಇಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಓದೋಕೆ ಬರುವ ಎಷ್ಟೋ ವಿದ್ಯಾರ್ಥಿಗಳ ಮೇಲೆ ಗೂಂಡಾಗಳು ಹೆದರಿಸಿ, ಬೆದರಿಸಿ ಹಲ್ಲೆ ಮಾಡುವ ಪ್ರಕರಣ ಹೆಚ್ಚುತ್ತಿವೆ.

By

Published : May 5, 2019, 11:38 AM IST

ರೌಡಿಶೀಟರ್ ಅಟ್ಟಹಾಸ

ಧಾರವಾಡ: ವಿದ್ಯಾಕಾಶಿ ಎಂಬ ಹೆಸರಿಗೆ ಮಸಿ ಬಳಿಯುವಂತೆ ರೌಡಿ ಶೀಟರ್​​​ಗಳ ಹಾವಳಿ ಹೆಚ್ಚುತ್ತಿದೆ. 2 ದಿನ ದಿನ ಹಿಂದೆ ಅಣ್ಣತಮ್ಮಂದಿರಾದ ಮೂವರು ರೌಡಿಶೀಟ್ ಗಳು ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ.

ರೌಡಿ ಶೀಟರ್ ಮಂಜುನಾಥ ಹಿರೇಮನಿ, ತಿರುಪತಿ ಹಿರೇಮನಿ ಹಾಗೂ ಅನುರಾಗ್ ಹಿರೇಮನಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಆರೋಪಿಗಳು. ಈಮೂವರೂ ಸಹೋದರರು ಲಕ್ಷ್ಮಿಸಿಂಗನಕೆರೆ ಬಡಾವಣೆ ನಿವಾಸಿಗಳು. ಏನಾಯ್ತೋ ಏನೋ ಕ್ಷುಲ್ಲಕ‌ ಕಾರಣಕ್ಕೆ ರಾಡ್​​​​ನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರೌಡಿಶೀಟರ್ ಅಟ್ಟಹಾಸ

ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಧಾರವಾಡ ಕಾಲೇಜ್​​​​ವೊಂದರ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮೈಮೇಲೆ ಬರೆ ಬೀಳುವಂತೆ ರೌಡಿಶೀಟರ್ ಗಳು ಹಲ್ಲೆ ಮಾಡಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ, ವಿದ್ಯಾರ್ಥಿಗಳು ಮಾತ್ರ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ನೀಡಿಲ್ಲ.

For All Latest Updates

TAGGED:

ABOUT THE AUTHOR

...view details