ಕರ್ನಾಟಕ

karnataka

ಧಾರವಾಡದಲ್ಲೊಂದು ವಿಶೇಷ ಮದುವೆ : ಹಸೆಮಣೆ ಏರಿದ ವಿಶೇಷಚೇತನರು

ಶ್ವೇತಾ ಮನೆಯಲ್ಲಿ ಇದ್ದುಕೊಂಡು ಕಸೂತಿ ಕಲೆ ಕೆಲಸ ಮಾಡಬಲ್ಲವಳಾಗಿದ್ದಾರೆ. ಇದೀಗ 40 ಜನರ ಮಿತಿಯೊಳಗೆ ಕೊರೊನಾ ನಿಯಮ ಪಾಲಿಸಿ ಮದುವೆ ಮಾಡಿಕೊಂಡಿದ್ದಾರೆ..

By

Published : Jun 28, 2021, 9:27 PM IST

Published : Jun 28, 2021, 9:27 PM IST

Updated : Jun 28, 2021, 10:15 PM IST

physically-handicapped-couples-married-in-dharwada
ವಿಶೇಷಚೇತನರು

ಧಾರವಾಡ: ಕೊರೊನಾ ವೈರಸ್ ಭೀತಿಯಿಂದ ಬಂದ್ ಆಗಿದ್ದ ಮದುವೆ ಸಮಾರಂಭಗಳು ಶುರುವಾಗಿವೆ. ಇದರ ಬೆನ್ನಲ್ಲೇ ಧಾರವಾಡದಲ್ಲಿ ಅಪರೂಪದ ಮದುವೆಯೊಂದು ನಡೆದಿದೆ.

ಧಾರವಾಡದ ಸತ್ತೂರ ಗ್ರಾಮದ ಕೇರಿ ಓಣಿ ಸತ್ತೂರಿನ ಕುಮಾರ ಎಂಬುವವರು ಧಾರವಾಡದ ಸಾರಸ್ವತಪುರದ ಶ್ವೇತಾ ಎಂಬಾಕೆಯನ್ನು ವರಿಸಿದ್ದಾರೆ. ಎರಡೂ ಮನೆಯವರು ಭಾಗವಹಿಸುವ ಮೂಲಕ ಸರಳವಾಗಿ ವಿವಾಹ ಸಮಾರಂಭ ನೆರವೇರಿಸಿದ್ದಾರೆ.

ಹಸೆಮಣೆ ಏರಿದ ವಿಶೇಷಚೇತನರು

ಸತ್ತೂರಿನ ಕುಮಾರನಿಗೆ ಬಾಲ್ಯದಿಂದಲೂ ಕಿವಿಯೂ ಕೇಳದು, ಮಾತು ಸಹ ಬರೋದಿಲ್ಲ. ಮನೆಯಲ್ಲಿ ಈತನೇ ಹಿರಿಮಗ. ಹೀಗಾಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಹೋಗುವ ಕುಮಾರನಿಗೆ ಇವನಂತೆಯೇ ಇರುವ ಹುಡುಗಿಯನ್ನು ಹುಡುಕುತ್ತಾ ಇದ್ದಾಗ ಸಾರಸ್ವತಪುರದ ಶ್ವೇತಾಳನ್ನು ನೋಡಿದ್ದರು. ಆಗ ಕುಮಾರನೂ ಇಷ್ಟಪಟ್ಟಿದ್ದಾನೆ.

ಶ್ವೇತಾ ಮನೆಯಲ್ಲಿ ಇದ್ದುಕೊಂಡು ಕಸೂತಿ ಕಲೆ ಕೆಲಸ ಮಾಡಬಲ್ಲವಳಾಗಿದ್ದಾಳೆ. ಇದೀಗ 40 ಜನರ ಮಿತಿಯೊಳಗೆ ಕೊರೊನಾ ನಿಯಮ ಪಾಲಿಸಿ ಮದುವೆ ಮಾಡಿಕೊಂಡಿದ್ದಾರೆ.

ಓದಿ:ಶಿವಮೊಗ್ಗ ಬಿಟ್ರೆ ಬೇರೆ ಜಿಲ್ಲೆ ಸಿಎಂಗೆ ಕಾಣಿಸ್ತಾ ಇಲ್ವಾ?: ಮಾಜಿ ಸಚಿವ ಹೆಚ್​ ಡಿ ರೇವಣ್ಣ ಕಿಡಿ

Last Updated : Jun 28, 2021, 10:15 PM IST

ABOUT THE AUTHOR

...view details