ಹುಬ್ಬಳ್ಳಿ: ಮಹಾಮಾರಿ ಕೊರೊನಾ ವಿರುದ್ಧ ರಾಜ್ಯ ಸರ್ಕಾರ ಹೋರಾಟ ನಡೆಸಿದ್ದು, ಕೊರೊನಾ ವಾರಿಯರ್ಸ್ ಸೇವೆಗಾಗಿ ಲಿಂಗರಾಜ ನಗರದ ಹಿರಿಯರ ಪ್ರೋ ಬಸ್ ಕ್ಲಬ್, ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡಿದೆ.
ಸಿಎಂ ಕೋವಿಡ್ ಪರಿಹಾರ ನಿಧಿಗೆ ಹುಬ್ಬಳ್ಳಿಯ ಪ್ರೋ ಬಸ್ ಕ್ಲಬ್ನಿಂದ ದೇಣಿಗೆ
ಕೊರೊನಾ ವಿರುದ್ಧ ಹೋರಾಟಕ್ಕೆ ಹುಬ್ಬಳ್ಳಿಯ ಪ್ರೋ ಬಸ್ ಕ್ಲಬ್ ಕೈ ಜೋಡಿಸಿದ್ದು, ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡಿದೆ.
ಸಿಎಂ ಕೋವಿಡ್ ಪರಿಹಾರ ನಿಧಿಗೆ ಹುಬ್ಬಳ್ಳಿಯ ಪ್ರೋಬಸ್ ಕ್ಲಬ್ನಿಂದ ದೇಣಿಗೆ
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮೂಲಕ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 66 ಸಾವಿರ ರೂಪಾಯಿಯ ಚೆಕ್ ನೀಡಿದೆ. ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಿಂದಗಿ, ಉಪಾಧ್ಯಕ್ಷ ಸಿ.ಜಿ.ಝಳಕಿ, ಕಾರ್ಯದರ್ಶಿ ಜಿ.ಆರ್.ಸಾಲಿಮಠ ಹಾಗೂ ಖಜಾಂಚಿ ಎಂ.ವಿ.ಕಡಗಾವಿ ಹಾಜರಿದ್ದರು.