ಹುಬ್ಬಳ್ಳಿ:ಮನೆ ಕಂದಾಯ ವಿಚಾರವಾಗಿ ವ್ಯಕ್ತಿಯೋರ್ವನಿಂದ ಲಂಚ ಪಡೆಯುವಾಗ ಮಹಾನಗರ ಪಾಲಿಕೆ ಕ್ಲರ್ಕ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮಹಾನಗರ ಪಾಲಿಕೆಯ
ವಲಯ ಕಚೇರಿ ನಂ.11ರ ನೌಕರ ಶಂಕರ ಘೋಡಕೆ ಎಂಬಾತ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಶಂಕರ ಘೋಡಕೆ ಮಹಾನಗರ ಪಾಲಿಕೆಯಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾಗಿದ್ದು, ನಗರದ ಹಜರತ್ ಅಲಿ ಮುಲ್ಲಾ ಎನ್ನುವವರಿಗೆ ಮನೆ ಕಂದಾಯ ಕಡಿತ ಮಾಡಲು 75 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.