ಧಾರವಾಡ:ಜ್ವರದಿಂದ ಬಳಲುತ್ತಿದ್ದ ಬಾಡಿ ಬಿಲ್ಡರ್ ಓರ್ವ ಆಕ್ಸಿಜನ್ ಕೊರತೆಯಿಂದ ಮೃತರಾಗಿರುವ ಘಟನೆ ನಗರದ ಮದಿಯಾಳ ಬಡಾವಣೆಯಲ್ಲಿ ನಡೆದಿದೆ.
ಬಡಾವಣೆಯ ನಿವಾಸಿಯಾದ ನವೀನ್ ಹುಲಮನಿ (31) ಮೃತ ವ್ಯಕ್ತಿ. ಕೆಲವು ದಿನಗಳ ಹಿಂದೆ ಅನಿಲ್ ಜ್ವರದಿಂದ ಬಳಲುತ್ತಿದ್ದರು. ಬಳಿಕ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಕೋವಿಡ್ ವರದಿ ನೆಗೆಟಿವ್ ಬಂದಿತ್ತು. 3 ದಿನಗಳ ಹಿಂದೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ನಿನ್ನೆ ಬೆಳಗ್ಗೆವರೆಗೆ ಚೆನ್ನಾಗಿ ಇದ್ದ ಅನಿಲ್ ನಿನ್ನೆ ಒಮ್ಮೆಲೇ ಆಕ್ಸಿಜನ್ ಪ್ರಮಾಣ ಇಳಿಕೆಯಾದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ. ಅನಿಲ್ ಬಾಡಿ ಬಿಲ್ಡರ್ ಆಗಿದ್ದು, ಒಳ್ಳೆಯ ಕವಿಯೂ ಆಗಿದ್ದರು. ಮುಂದಿನ ತಿಂಗಳು ಅನಿಲ್ ಪುಸ್ತಕ ಬಿಡುಗಡೆಗೆ ಸಿದ್ಧವಾಗಿತ್ತು. ಪುಸ್ತಕ ಬಿಡುಗಡೆಗೂ ಮುನ್ನವೇ ಅನಿಲ್ ಮೃತರಾಗಿರುವುದು ದುರಂತ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಅನಿಲ್ಗೆ ಒಂದು ವರ್ಷದ ಮುದ್ದಾದ ಮಗುವಿತ್ತು.