ಕರ್ನಾಟಕ

karnataka

ಕೋವಿಡ್ ಕಾರಣ ಬಜೆಟ್​​ಗೆ ಸಂಪನ್ಮೂಲ ಕೊರತೆಯಾಗಿದೆ: ಸಚಿವ ಶ್ರೀರಾಮುಲು

ಕೋವಿಡ್​ ಕಾರಣ ಬಜೆಟ್​ಗೆ ಸಂಪನ್ಮೂಲ ಕೊರತೆ ಆಗಿದೆ. ಆದರೂ ಸಿಎಂ ಬಿಎಸ್​ವೈ ಎಲ್ಲರಿಗೂ ನ್ಯಾಯು ಒದಗಿಸಲಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದರು.

By

Published : Feb 14, 2021, 9:33 PM IST

Published : Feb 14, 2021, 9:33 PM IST

lack of resources for budget due to Covid
ಸಚಿವ ಶ್ರೀ ರಾಮುಲು

ದಾವಣಗೆರೆ: ಕೋವಿಡ್ ಕಾರಣ ಬಜೆಟ್​ಗೆ ಸಂಪನ್ಮೂಲ ಕೊರತೆ ಆಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚಿನ ಅನುದಾನ ಸಿಗುತ್ತೆ. ಸಿಎಂ ಬಿಎಸ್​ವೈ ಸಂಕಷ್ಟದಲ್ಲಿ ಇರುವ ಎಲ್ಲರಿಗೂ ನ್ಯಾಯ ಒದಗಿಸಲಿದ್ದಾರೆ ಎಂದರು.

ಸಚಿವ ಶ್ರೀರಾಮುಲು

ಮೀಸಲಾತಿ ಹೋರಾಟ ಕುರಿತು ಮಾತನಾಡಿ, ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಲಿದೆ. ವಾಲ್ಮೀಕಿ ಸಮಾಜದ ಮೀಸಲಾತಿ ಹೆಚ್ಚಳ ಆಗುತ್ತೆ ಎಂದು ಹೇಳಿದರು.

For All Latest Updates

ABOUT THE AUTHOR

...view details