ಕರ್ನಾಟಕ

karnataka

ETV Bharat / state

ವಿಟ್ಲ ಬಸ್ ನಿಲ್ದಾಣ ಬಳಿ ಬೆಂಕಿ ಅವಘಡ: ಎರಡು ಅಂಗಡಿಗಳು ಭಸ್ಮ

ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯಲ್ಲಿ ಅಗ್ನಿ ಅವಘಡಕ್ಕೆ ಎರಡು ಅಂಗಡಿ ಮಳಿಗೆಗಳು ಸುಟ್ಟು ಕರಕಲಾಗಿವೆ.

By

Published : Oct 20, 2020, 12:02 PM IST

two shops burned down in a  fire accident
ಬೆಂಕಿ ಅವಘಡ

ಬಂಟ್ವಾಳ:ಬೆಳ್ಳಂಬೆಳಗ್ಗೆಯೇ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಎರಡು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ.

ಬೆಂಕಿ ಅವಘಡ

ವಿಟ್ಲದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿರುವ ಕೆ.ಜೆ.ಟವರ್ಸ್ ನಲ್ಲಿರುವ ಎಂ.ಪಿ. ಹಾರ್ಡ್​ವೇರ್​​ ಮತ್ತು ಪೇಂಟ್​ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ.

ಆರಂಭದಲ್ಲಿ ಪೇಂಟ್​ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ನಂತರದಲ್ಲಿ ಪಕ್ಕದಲ್ಲಿದ್ದ ಬೇಕರಿಗೂ ಬೆಂಕಿ ವ್ಯಾಪಿಸಿದೆ. ಇದರಿಂದಾಗಿ ಎರಡೂ ಅಂಗಡಿಗಳೂ ಸುಟ್ಟು ಹೋಗಿದೆ.

ABOUT THE AUTHOR

...view details