ಕರ್ನಾಟಕ

karnataka

ಕೇಪು ದೇವಸ್ಥಾನಕ್ಕೆ ನುಗ್ಗಿ ಬೆಳ್ಳಿ ವಸ್ತುಗಳನ್ನು ಎಗರಿಸಿದ ಕಳ್ಳರು

By

Published : Oct 13, 2020, 6:39 PM IST

ಬಂಟ್ವಾಳದ ಹೆಸರುವಾಸಿ ಕೇಪು ಶ್ರೀ ದುರ್ಗಾಪರಮೇಶ್ವರಿ ಗರ್ಭ ಗುಡಿಗೆ ನುಗ್ಗಿದ ಕಳ್ಳರು ಸುಮಾರು ಅರ್ಧ ಕೆಜಿಗೂ ಅಧಿಕ ತೂಕದ ಬೆಳ್ಳಿಯ ಸಾಮಗ್ರಿ ಹಾಗೂ ಎರಡು ಕಾಣಿಕೆ ಹುಂಡಿಯನ್ನು ತುಂಡರಿಸಿ ಸುಮಾರು ಏಳೂವರೆ ಸಾವಿರ ನಗದು ದೂಚಿದ್ದಾರೆ.

Robbers attack Cape temple
ಕೇಪು ದೇವಸ್ಥಾನಕ್ಕೆ ನುಗ್ಗಿ ಬೆಳ್ಳಿ ವಸ್ತುಗಳನ್ನು ಎಗರಿಸಿದ ಕಳ್ಳರು

ಬಂಟ್ವಾಳ:ಇತಿಹಾಸ ಪ್ರಸಿದ್ಧ ಕಜಂಬು ಜಾತ್ರೆಗೆ ಹೆಸರುವಾಸಿಯಾಗಿರುವ ಕೇಪು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ದೇವಸ್ಥಾನದ ಗರ್ಭಗುಡಿ ಬೀಗ ಒಡೆದು ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ಹಣ ಹಾಗೂ ಬೆಳ್ಳಿಯ ವಸ್ತುವನ್ನು ದೋಚಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ದೇವಾಲಯದ ಅರ್ಚಕರು ಬೆಳಗ್ಗೆ ದೇವಾಲಯಕ್ಕೆ ಬರುವ ಸಂದರ್ಭ ಗರ್ಭಗುಡಿಯ ಬಾಗಿಲುಗಳು ತೆರೆದೇ ಇದ್ದುದನ್ನು ಗಮನಿಸಿ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗರ್ಭಗುಡಿಯ ಹೊರಗೆ ಇದ್ದ ಕಾಣಿಕೆ ಹುಂಡಿಯನ್ನು ತುಂಡರಿಸಿದ್ದು, ಅದರಲ್ಲಿ ಹೆಚ್ಚಿನ ನಗದು ಇರಲಿಲ್ಲ ಎನ್ನಲಾಗಿದೆ.

ಗರ್ಭ ಗುಡಿಯ ಒಳಗೆ ಇದ್ದ ಸುಮಾರು ಅರ್ಧ ಕೆಜಿಗೂ ಅಧಿಕ ತೂಕದ ಬೆಳ್ಳಿಯ ಸಾಮಗ್ರಿ ಹಾಗೂ ಎರಡು ಕಾಣಿಕೆ ಹುಂಡಿಯನ್ನು ತುಂಡರಿಸಿ ಸುಮಾರು ಏಳೂವರೆ ಸಾವಿರ ನಗದು ದೂಚಿದ್ದಾರೆ. ಬೆರಳಚ್ಚು ತಜ್ಞರರೊಂದೊಗೆ ಸ್ಥಳಕ್ಕೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ರೆಡ್ಡಿ ಹಾಗೂ ತಂಡ ಬೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಡೊಂಬ ಹೆಗಡೆ ಅರಸುಮನೆತನದ ಆಡಳಿತಕ್ಕೊಳಪಟ್ಟ ದೇವಾಲಯಗಳಲ್ಲಿ ಪ್ರಮುಖವಾದ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನ ವಿಶೇಷ ಕಾರ್ಣಿಕವನ್ನು ಹೊಂದಿದೆ.

ABOUT THE AUTHOR

...view details