ಕರ್ನಾಟಕ

karnataka

ಕಂಬಳ ವೇಗಿ ಶ್ರೀನಿವಾಸ ಗೌಡರಿಗೆ ಸನ್ಮಾನ

By

Published : Mar 18, 2020, 8:01 AM IST

'ಶ್ರೀನಿವಾಸ ಗೌಡರು ತಮ್ಮ ಸಾಧನೆಯ ಮೂಲಕ ಕೇವಲ ಕುಡುಬಿ ಜನಾಂಗ ಮಾತ್ರವಲ್ಲ, ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ'.

ಸನ್ಮಾನ
ಸನ್ಮಾನ

ಬಂಟ್ವಾಳ:ತಾಲೂಕಿನ ಸಿದ್ಧಕಟ್ಟೆ ಕೋರ್ಯಾರು ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ಹೋಳಿ ಹಬ್ಬದ ವರ್ಷಾವಧಿ ಮಹೋತ್ಸವದಲ್ಲಿ ಕಂಬಳ ಗದ್ದೆಯ ಮಿಂಚಿನ ವೇಗದ ಓಟಗಾರ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ತಾ.ಪಂ. ಸದಸ್ಯ ಪ್ರಭಾಕರ, ತಮ್ಮ ಸಾಧನೆಯ ಮೂಲಕ ಕೇವಲ ಕುಡುಬಿ ಜನಾಂಗದ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಗುಣಗಾನ ಮಾಡಿದರು.

ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ್ ಸುಂದರ ಶಾಂತಿ ಶುಭ ಹಾರೈಸಿದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಿದ್ದಕಟ್ಟೆ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details