ಕರ್ನಾಟಕ

karnataka

ETV Bharat / state

ಚಿನ್ನ ಕದ್ದವನೊಂದಿಗೆ ಕಡಬಕ್ಕೆ ಬಂದ ಕೇರಳ ಪೋಲೀಸರು

ಕೇರಳದಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ದಕ್ಷಿಣ ಕನ್ನಡದ ಕಡಬದ ಚಿನ್ನಾಭರಣ ಮಳಿಗೆಯೊಂದಕ್ಕೆ ಮಾರಟ ಮಾಡಿದ್ದ ಆರೋಪಿ ಸಮೇತ ಕೇರಳ ಪೊಲೀಸರು ಆಗಮಿಸಿದ್ದಾರೆ.

By

Published : Dec 13, 2019, 7:40 PM IST

Gold Robbery
ಚಿನ್ನ ಕದ್ದವನೊಂದಿಗೆ ಕಡಬಕ್ಕೆ ಬಂದ ಕೇರಳ ಪೋಲೀಸರು

ಕಡಬ: ಕೇರಳದಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ದಕ್ಷಿಣ ಕನ್ನಡದ ಕಡಬದ ಚಿನ್ನಾಭರಣ ಮಳಿಗೆಯೊಂದಕ್ಕೆ ಮಾರಟ ಮಾಡಿದ್ದ ಆರೋಪಿ ಸಮೇತ ಕೇರಳ ಪೊಲೀಸರು ಆಗಮಿಸಿದ್ದಾರೆ.

ಕೇರಳ ನಿವಾಸಿ ಖಾದರ್ ಎಂಬಾತ ಕಳ್ಳತನ ಮಾಡಿ, ಕಡಬದಲ್ಲಿ ವಾಸವಿರುವ ಆರೋಪಿಯ ಸಹೋದರ ಶಾಫಿ ಎಂಬಾತನ ಮೂಲಕ ಜ್ಯುವೆಲ್ಲರ್ಸ್​ ಮಳಿಗೆಯೊಂದಕ್ಕೆ ಸ್ವಲ್ಪ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿಸಿದ್ದಾಗಿ ಬಾಯಿಬಿಟ್ಟಿದ್ದಾನೆ. ಹಾಗಾಗಿ ಆರೋಪಿಸಿ ಸಮೇತ ಆಗಮಿಸಿದ ಪೊಲೀಸರು, ಜ್ಯುವೆಲ್ಲರ್​ ಶಾಪ್​​ನಲ್ಲಿ ತನಿಖೆ ನಡೆಸಿದ್ದಾರೆ.

ಇದೀಗ ಚಿನ್ನವನ್ನು ಮಾರಾಟ ಮಾಡಲು ಸಹಕರಿಸಿದ್ದ ಸಹೋದರ ಶಫಿ ತಲೆಮರೆಸಿಕೊಂಡಿದ್ದು, ಕಡಬ ಪೊಲೀಸರ ಸಹಾಯದೊಂದಿಗೆ ಕೇರಳ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ABOUT THE AUTHOR

...view details