ಚಿತ್ರದುರ್ಗ: ಪ್ರಿಯತಮೆಯು ತನ್ನ ಪುತ್ರನನ್ನು ಆಂಧ್ರ ಪ್ರದೇಶಕ್ಕೆ ಕರೆದೊಯ್ದಿದ್ದಳೆಂದು ಆಕೆಗೆ ಪ್ರಿಯಕರ ಹಿಂಸೆ ನೀಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಪ್ರಿಯತಮೆಗೆ ಹಾಗು ಮಗನಿಗೆ ಹಿಂಸೆ ನೀಡಿದ ಪ್ರಕರಣದ ಆರೋಪಿ ಬಂಧನ ಭೀತಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಚಿತ್ರದುರ್ಗ: ಪ್ರಿಯತಮೆಯು ತನ್ನ ಪುತ್ರನನ್ನು ಆಂಧ್ರ ಪ್ರದೇಶಕ್ಕೆ ಕರೆದೊಯ್ದಿದ್ದಳೆಂದು ಆಕೆಗೆ ಪ್ರಿಯಕರ ಹಿಂಸೆ ನೀಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಪ್ರಿಯತಮೆಗೆ ಹಾಗು ಮಗನಿಗೆ ಹಿಂಸೆ ನೀಡಿದ ಪ್ರಕರಣದ ಆರೋಪಿ ಬಂಧನ ಭೀತಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಿಯತಮೆಯು ತನ್ನೊಂದಿಗೆ ಆರೋಪಿಯ ಮಗನನ್ನು ಕರೆದೊಯ್ದಿದ್ದಕ್ಕೆ ಆತ ಹಿಂಸಿಸಿದ್ದಾನೆ ಎನ್ನುವ ಮಾತು ಕೇಳಿಬಂದಿತ್ತು. ಸದ್ಯ ಘಟ್ಟಿಹೊಸಹಳ್ಳಿಯ ಆರೋಪಿ ಶಿವಮೂರ್ತಿ(30)ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.