ಚಿಕ್ಕಮಗಳೂರು: 'ಆಕ್ಸಿಜನ್ ಆನ್ ವೀಲ್' ಯೋಜನೆ ಮೂಲಕ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆ ಬಾಗಿಲಲ್ಲೇ ಆಮ್ಲಜನಕ ನೀಡುವ ವ್ಯವಸ್ಥೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಕೈ ಹಾಕಿದೆ.
ಬೆಂಗಳೂರನ್ನ ಹೊರತುಪಡಿಸಿದರೆ ಈ ಯೋಜನೆಯನ್ನ ಜಾರಿಗೆ ತಂದ ಮೊದಲ ಜಿಲ್ಲೆ ಚಿಕ್ಕಮಗಳೂರು. ಈಗಾಗಲೇ ಸಾರಿಗೆ ಇಲಾಖೆ ಜೊತೆ ಮಾತನಾಡಿರೋ ಜಿಲ್ಲಾಡಳಿತ 'ಆಕ್ಸಿಜನ್ ಆನ್ ವೀಲ್' ಅಭಿಯಾನದಲ್ಲಿ ಬಸ್ಗಳನ್ನು ಸಿದ್ಧ ಮಾಡಿದೆ. ಬಸ್ನಲ್ಲಿ 6 ರಿಂದ 8 ಜನ ರೋಗಿಗಳಿಗೆ ಏಕಕಾಲದಲ್ಲಿ ಆಮ್ಲಜನಕ ನೀಡಬಹುದಾಗಿದೆ. ಯೋಜನೆಗೆ ಬೇಕಾದ ಕೆಲ ತಾಂತ್ರಿಕ ಕೆಲಸಗಳು ನಡೆಯುತ್ತಿದ್ದು, ನಾಳೆ ಲೋಕಾರ್ಪಣೆಗೊಳ್ಳಲಿದೆ.