ಕರ್ನಾಟಕ

karnataka

ಕಾಡಿನಲ್ಲಿ ಮೃತಪಟ್ಟ ಗೃಹಿಣಿ: ಪತಿಯೊಂದಿಗೆ ಅರಣ್ಯಕ್ಕೆ ತೆರಳಿದ್ದೇಕೆ ಎಂಬುದೇ ಅನುಮಾನ..!

ಒಂದು ವರ್ಷದ ಹಿಂದೆ ಪ್ರೀತಿಸಿ, ವಿವಾಹವಾಗಿದ್ದ ಗೃಹಿಣಿಯೊಬ್ಬಳು ಕಾಡಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಚಿಕ್ಕಮಗಳೂರು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

By

Published : Jan 29, 2022, 1:45 PM IST

Published : Jan 29, 2022, 1:45 PM IST

Updated : Jan 29, 2022, 2:29 PM IST

house-wife-died-suspiciously-in-a-forest-at-chikkamagalur
ಕಾಡಿನಲ್ಲಿ ಮೃತಪಟ್ಟ ಗೃಹಿಣಿ: ಪತಿಯೊಂದಿಗೆ ಕಾಡಿಗೆ ತೆರಳಿದ್ದೇಕೆ? ಎಂಬುದೇ ಅನುಮಾನ..

ಚಿಕ್ಕಮಗಳೂರು:ವಿವಾಹಿತ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತನ್ನ ಪತಿ ಅಭಿಷೇಕ್​ ಜೊತೆಯಲ್ಲಿ ರಾತ್ರಿಯಿಡೀ ಕಾಡಿನಲ್ಲಿದ್ದ ಸುಮಾ ಎಂಬಾಕೆ ಸಾವನ್ನಪ್ಪಿದ್ದಾಳೆ. ಈ ವಿಚಾರವನ್ನು ಸ್ವತಃ ಅಭಿಷೇಕ್ ಎಲ್ಲರಿಗೂ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಅನುಮಾನಗಳು ಕಾಡುತ್ತಿವೆ. ಸುಮಾ ಮತ್ತು ಅಭಿಷೇಕ್ ಒಂದು ವರ್ಷದ ಹಿಂದೆ ಪ್ರೀತಿಸಿ, ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.

ಕಾಡಿನಲ್ಲಿ ಮೃತಪಟ್ಟ ಗೃಹಿಣಿ

ಕಾರ್ಯಕ್ರಮವೊಂದನ್ನು ಮುಗಿಸಿ ವಾಪಸಾಗುವ ವೇಳೆ ಈ ಜೋಡಿ ಕಾಡಿಗೆ ತೆರಳಿದ್ದು ಯಾಕೆ?, ಮಹಿಳೆ ಸಾವನ್ನಪ್ಪಲು ಕಾರಣವೇನು? ಎಂಬ ಬಗ್ಗೆ ಸಂದೇಹಗಳು ಉದ್ಭವಿಸಿವೆ. ರಾತ್ರಿಯ ವೇಳೆ ಪತ್ನಿಯ ಮೃತದೇಹದೊಂದಿಗೆ ಪತಿ ಅಭಿಷೇಕ್ ಕಾಡಿನಲ್ಲಿಯೇ ಕಳೆದಿದ್ದಾನೆ ಎನ್ನಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಘಟನಾ ಸ್ಥಳಕ್ಕೆ ಪೊಲೀಸರು, ಮೃತಳ ಸಂಬಂಧಿಕರು ಹಾಗೂ ಸ್ಥಳೀಯರು ತೆರಳಿದ್ದಾರೆ. ಚಿಕ್ಕಮಗಳೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.

ಇದನ್ನೂ ಓದಿ:ರಾಯಚೂರು ಪಿಎಸ್ಐ ಮನೆಯಲ್ಲೇ ಕಳ್ಳತನ ಮಾಡಿದ ಚಾಲಕಿ ಕಳ್ಳರು: ನಗದು ಚಿನ್ನಾಭರಣ ದೋಚಿ ಪರಾರಿ!

Last Updated : Jan 29, 2022, 2:29 PM IST

ABOUT THE AUTHOR

...view details