ಕರ್ನಾಟಕ

karnataka

ETV Bharat / state

ಬಂಡೆಯ ಮೇಲಿಂದ ಬಿದ್ದ ದೈತ್ಯ ಆನೆ: ನರಳಿ ನರಳಿ ಕೊನೆಯುಸಿರೆಳೆದ ಗಜರಾಜ

ಬಂಡೆಯ ಮೇಲಿಂದ ಬಿದ್ದ ದೈತ್ಯ ಆನೆಯೊಂದು ನರಳಿ ನರಳಿ ಕೊನೆಯುಸಿರೆಳೆದಿದೆ. ನೋವು ಸಹಿಸಿಕೊಳ್ಳಲಾಗದೇ ಗಜರಾಜ ಬಿದ್ದ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ಬಾಳೆಹೊನ್ನೂರಿನ ಹ್ಯಾರಂಬಿ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ.

By

Published : Jul 4, 2019, 12:04 PM IST

ಆನೆ ಸಾವು

ಚಿಕ್ಕಮಗಳೂರು:ಜಿಲ್ಲೆಯ ಬಾಳೆಹೊನ್ನೂರಿನ ಹ್ಯಾರಂಬಿ ಗ್ರಾಮದ ಸಮೀಪ ಬಂಡೆಯ ಮೇಲಿಂದ ದೈತ್ಯ ಗಾತ್ರದ ಗಂಡಾನೆಯೊಂದು ಕೆಳಗೆ ಬಿದ್ದು ಮೃತಪಟ್ಟಿದೆ.

ಮೃತಪಟ್ಟ ಆನೆಯನ್ನು ನೋಡಲು ಬಂದ ಸ್ಥಳೀಯರು

ಬಂಡೆ ಮೇಲಿಂದ ಬಿದ್ದ ನಂತರ ತುಂಬಾ ಸುಸ್ತಾಗಿ ಕೆಲ ಕ್ಷಣಗಳ ಕಾಲ ಸ್ಥಳದಲ್ಲಿಯೇ ನಿಂತಿತು. ಬಳಿಕ ಸುಧಾರಿಸಿಕೊಳ್ಳಲು ಆಗದೇ ನಿಧಾನವಾಗಿ ನಿತ್ರಾಣಕ್ಕೆ ಜಾರಿ ಕೆಳಗೆ ಬೀಳುವ ಮೂಲಕ ಪ್ರಾಣಬಿಟ್ಟಿದೆ. ಈ ಕರುಣಾಜನಕ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಬಂಡೆಯ ಮೇಲಿಂದ ಬಿದ್ದ ದೈತ್ಯ ಆನೆ

ಸುಮಾರು 45 ರಿಂದ 50 ಅಡಿ ಎತ್ತರದ ಬಂಡೆ ಮೇಲಿಂದ ಆಕಸ್ಮಿಕವಾಗಿ ಕಾಲು ಜಾರಿ ಆನೆ ಬಿದ್ದಿದೆ. ವನ್ಯ ಜೀವಿ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ವೇಳೆಯೇ ಈ ಅವಘಡ ಜರುಗಿದೆ. ಮೃತ ಆನೆಯ ನರಳಾಟ ನೋಡಿದ ಸ್ಥಳೀಯರು ಮಮ್ಮಲಮರುಗಿದ್ದಾರೆ.

ಮೊಬೈಲ್​ನಲ್ಲಿ ಸೆರೆಯಾದ ದೃಶ್ಯ

ABOUT THE AUTHOR

...view details