ಕರ್ನಾಟಕ

karnataka

ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನಾಲೆಗೆ ಬಿದ್ದ ಬುಲೆರೋ... ಪತಿ ಪಾರು, ಪತ್ನಿ ನೀರುಪಾಲು

ಚಾಲಕನ ನಿಯಂತ್ರಣ ತಪ್ಪಿ ಬುಲೆರೋ ವಾಹನವೊಂದು ಭದ್ರಾ ನಾಲೆಗೆ ಬಿದ್ದಿರುವ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪ ನಡೆದಿದೆ.

By

Published : Aug 24, 2020, 5:06 PM IST

Published : Aug 24, 2020, 5:06 PM IST

Bulero fell to Bhadra Nala  Driver out of control
ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನಾಲೆಗೆ ಬಿದ್ದ ಬುಲೆರೋ ವಾಹನ..!

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಬುಲೆರೋ ವಾಹನವೊಂದು ಭದ್ರಾ ನಾಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನಾಲೆಗೆ ಬಿದ್ದ ಬುಲೆರೋ ವಾಹನ..!

ಸಂತೋಷ್ ಹಾಗೂ ಅವರ ಪತ್ನಿ ಸರ್ವಮಂಗಳ ಎಂಬುವರು ರಂಗನಾಥ ಸ್ವಾಮಿ ದೇವಾಲಯಕ್ಕೆ ಹೋಗಿ ಬರುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಸಂತೋಷ್​ ಕಾರಿನ ಬಾಗಿಲು ತೆರೆದು ನಾಲೆಯಿಂದ ಮೇಲೆ ಬಂದಿದ್ದು, ಅವರ ಪತ್ನಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬುಲೆರೋ ವಾಹನವನ್ನು ಮೇಲೆತ್ತುವ ಕೆಲಸ ಮಾಡಿದ್ದು, ಸರ್ವಮಂಗಳ ಅವರ ಮೃತದೇಹಕ್ಕಾಗಿ ಭದ್ರಾ ನಾಲೆಯಲ್ಲಿ ಶೋಧ ಕಾರ್ಯ‘ ಮುಂದುವರೆದಿದೆ. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details