ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಹರಿಹರಪುರದ ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿ, ಮಠದ ಸಚ್ಚಿದಾನಂದ ಸ್ವಾಮೀಜಿ ದರ್ಶನ ಮಾಡಿದ್ದೇನೆ. ಈ ಕ್ಷೇತ್ರಕ್ಕೆ ಬಂದಿದ್ದು ತುಂಬಾ ಖುಷಿ ತಂದಿದೆ. ಈ ಜಾಗದಲ್ಲಿ ರಾಜಕೀಯ ಚರ್ಚೆ ಬೇಡ ಎಂದು ಹೇಳಿದರು.
ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನ ಪಡೆದ ಬಿಎಸ್ವೈ, ಅರುಣ್ ಸಿಂಗ್
ಹರಿಹರಪುರದ ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರು ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನ ಪಡೆದ ಬಿಎಸ್ವೈ ಹಾಗೂ ಅರುಣ್ ಸಿಂಗ್
ಇದನ್ನೂ ಓದಿ:ಆರ್ಎಸ್ಎಸ್-ಎಸ್ಡಿಪಿಐ ಹೋಲಿಕೆ ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನ: ಸಚಿವ ಜೋಶಿ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಈ ಬಾರಿ ರಾಜಕೀಯ ದೊಂಬರಾಟಕ್ಕೆ ಬೆಲೆ ಕೊಡಲು ಹೋಗಲ್ಲ. ಅನೇಕ ದಿನಗಳಿಂದ ಪಕ್ಷದ ಕಾರ್ಯ ಕ್ರಮಗಳಲ್ಲಿ ಭಾಗವಹಿಸದ್ದೇನೆ. ಜನ ಇಂದು ಮೋದಿ-ಬಿಜೆಪಿ ಜೊತೆ ಇದ್ದಾರೆ. ನಮ್ಮ ಗುರಿ 150 ಕ್ಷೇತ್ರ ಗೆಲ್ಲುವುದು ಅಷ್ಟೆ. ಆ ಗುರಿ ಮುಟ್ಟಲು ಎಲ್ಲಾ ಪ್ರಯತ್ನ ಮಾಡ್ತೀವಿ, ಯಶಸ್ವಿಯಾಗುತ್ತೇವೆಂಬ ನಂಬಿಕೆ ಇದೆ ಎಂದು ವಿಶ್ವಾಸ ಹೊರಹಾಕಿದರು.