ಶಿಡ್ಲಘಟ್ಟ (ಚಿಕ್ಕಬಳ್ಳಾಪುರ):ಶಿಡ್ಲಘಟ್ಟ ತಾಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಪ್ಪನಹಳ್ಳಿಯ ಮೂರ್ನಾಲ್ಕು ಕಡೆಗಳಲ್ಲಿ 10ಕ್ಕೂ ಹೆಚ್ಚು ಮೈನಾ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪಿವೆ. ಪಕ್ಷಿಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಹತ್ತಿರದಲ್ಲಿ ಯಾವುದೇ ವಿದ್ಯುತ್ ತಂತಿಗಳಿಲ್ಲ. ಹಕ್ಕಿಗಳನ್ನು ಬೇಟೆಯಾಡಿರುವ ಕುರುಹುಗಳೂ ಇಲ್ಲ. ಯಾವುದಾದರೂ ವೈರಸ್ನಿಂದ ಮೃತಪಟ್ಟಿವೆಯಾ, ಅಕಸ್ಮಾತ್ ಇವುಗಳಿಗೆ ವೈರಸ್ ತಗುಲಿದ್ದರೆ ಅದು ಮನುಷ್ಯರಿಗೆ ಹರಡಬಹುದೇ? ಎಂಬುದನ್ನು ತಜ್ಞರು ಖಚಿತಪಡಿಸಬೇಕಿದೆ. ಕೇವಲ ಮೈನಾ (ಗೊರವಂಕ) ಹಕ್ಕಿಗಳೇ ಏಕೆ ಸಾಯುತ್ತಿವೆ? ಎಂಬುದು ಸಹ ಇನ್ನಷ್ಟೇ ತಿಳಿಯಬೇಕಿದೆ.