ಕರ್ನಾಟಕ

karnataka

ETV Bharat / state

ಹಸಿದವರಿಗೆ ಆಹಾರ ವಿತರಿಸಿ ಹೆಣ್ಣು ಮಕ್ಕಳ ತಂಡದಿಂದ ಮಾನವೀಯ ಕಾರ್ಯ

ಕೊಳ್ಳೇಗಾಲ ಪಟ್ಟಣದಲ್ಲಿ ಕರ್ಫ್ಯೂ ನಡುವೆ ಆಹಾರ ಸಿಗದೆ ಪರದಾಡುವವರಿಗೆ ಯುವ ತಂಡವೊಂದು ಆಹಾರ ವಿತರಿಸುತ್ತಿದೆ.

By

Published : May 10, 2021, 8:54 AM IST

Youth team in Kollegal Distributing food to Poor people
ಯೂತ್ ಐಕಾಕ್ ತಂಡದಿಂದ ಆಹಾರ ವಿತರಣೆ

ಕೊಳ್ಳೇಗಾಲ:ಕೋವಿಡ್ ಕರ್ಫ್ಯೂ ಕಾರಣದಿಂದ ಆಹಾರ ಸಿಗದೆ ರಸ್ತೆ ಬದಿ ಪರದಾಡುವ ಅನಾಥ, ನಿರ್ಗತಿಕರಿಗೆ ಪಟ್ಟಣದ ಹೆಣ್ಣು ಮಕ್ಕಳ ತಂಡವೊಂದು ಆಹಾರ ವಿತರಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದೆ.

ಪಟ್ಟಣದ ಯೂತ್ ಐಕಾನ್ ಬಳಗದ ಚೇತನ, ಜಯಶ್ರೀ, ಶ್ವೇತ ಸಿಂಧು, ಅನುಶ್ರೀ, ಕೀರ್ತನ ಶ್ರೀ ಆಹಾರದ ಪ್ಯಾಕೇಟ್​ಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಅನಾಥ, ನಿರ್ಗತಿಕರು ಮಾತ್ರವಲ್ಲದೆ ಗ್ರಾಮಾಂತರ ಭಾಗದಿಂದ ಕೆಲಸ ಅರಸಿ ಬಂದು ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೂ ಆಹಾರ ವಿತರಿಸುತ್ತಿದ್ದಾರೆ.

ಹೆಣ್ಣು ಮಕ್ಕಳು ತಂಡ ಕಟ್ಟಿಕೊಂಡು ಮಾಡುತ್ತಿರುವ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details