ಕರ್ನಾಟಕ

karnataka

ETV Bharat / state

MA, BEd ಓದಿರುವೆ - ಕೆಲಸ ಕೊಡಿ ಇಲ್ಲವೇ ಬೋರ್ವೆಲ್ ಹಾಕಿಸಿ: ಮತಪೆಟ್ಟಿಗೆಯಲ್ಲಿ ಹೀಗೊಂದು ಮನವಿ ಪತ್ರ

ವಿಧಾನ ಪರಿಷತ್​ನ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ವೇಳೆ ಮತಪೆಟ್ಟಿಗೆಯಲ್ಲಿ ಮತದಾರರೊಬ್ಬರ ಮನವಿ ಪತ್ರ ಪತ್ತೆಯಾಗಿದೆ.

By

Published : Jun 16, 2022, 10:12 AM IST

Updated : Jun 16, 2022, 10:17 AM IST

ಮತಪೆಟ್ಟಿಗೆಯಲ್ಲಿ ಪತ್ರ
ಮತಪೆಟ್ಟಿಗೆಯಲ್ಲಿ ಪತ್ರ

ಚಾಮರಾಜನಗರ:ಮತದಾರರೊಬ್ಬರು ಮತಪೆಟ್ಟಿಗೆಗೆ ಮತ ಹಾಕುವ ಜೊತೆಗೆ ಬೇಡಿಕೆ ಪತ್ರ ಕೂಡ ಹಾಕಿರುವುದು ಮತ ಎಣಿಕೆ ವೇಳೆ ಬಯಲಾಗಿದೆ. ವಿಧಾನ ಪರಿಷತ್​ನ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ವೇಳೆ ಪತ್ರ ನೋಡಿ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.

ಮತಪೆಟ್ಟಿಗೆಯಲ್ಲಿ ಹೀಗೊಂದು ಪತ್ರ

ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ರಾಜೇಂದ್ರ ಎಂಬುವರು ಮತಪೆಟ್ಟಿಗೆಯಲ್ಲಿ ಮನವಿ ಪತ್ರ ಹಾಕಿದ್ದಾರೆ ಎಂದು ತಿಳಿದುಬಂದಿದೆ. 'ತಾನು ಕಷ್ಟದಲ್ಲಿ BA, BEd, MA ಮಾಡಿದ್ದು 1.20 ಗುಂಟೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇನೆ. ಅಂಬೇಡ್ಕರ್ ನಿಗಮದಿಂದ ತನಗೊಂದು ಕೊಳವೆಬಾವಿ ತೋಡಿಸಿಕೊಡಿ ಇಲ್ಲದಿದ್ದರೇ ಸರ್ಕಾರಿ ನೌಕರಿ ಕೊಡಿಸಿ, ಚುನಾವಣೆ ಇಲಾಖೆಯು ತನ್ನ ಹೆಸರನ್ನು ಗೌಪ್ಯವಾಗಿಟ್ಟು ಸರ್ಕಾರಕ್ಕೆ ಮನವಿ ತಲುಪಿಸಲಿ' ಎಂದು ಮತದಾರ ಪತ್ರದಲ್ಲಿ ಕೋರಿಕೊಂಡಿದ್ದಾರೆ.

ಜೊತೆಗೆ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ರಸಗೊಬ್ಬ ಬೆಲೆ ಕಡಿಮೆ ಮಾಡಬೇಕು. ಪ್ರಧಾನಿ 15 ಲಕ್ಷ ರೂ. ಹಣವವನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ಹೇಳಿದ್ದರು ಎಂದೂ ಅವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮತ ಹಾಕುವ ಜೊತೆಗೆ ಮನವಿ ಪತ್ರವನ್ನು ಹಾಕುವ ಮೂಲಕ ರಾಜೇಂದ್ರ ಗಮನ ಸೆಳೆದಿದ್ದಾರೆ.

ವಿಧಾನ ಪರಿಷತ್​ನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡ, ಬಿಜೆಪಿ ಅಭ್ಯರ್ಥಿ ಮೈ ವಿ ರವಿಶಂಕರ್, ಜೆಡಿಎಸ್ ಅಭ್ಯರ್ಥಿ ರಾಮು ಅವರು ಕಣಕ್ಕೆ ಇಳಿದಿದ್ದರು.

(ಇದನ್ನೂ ಓದಿ: ಹಣಮಂತ ನಿರಾಣಿಗೆ ಸತತ ಎರಡನೇ ಬಾರಿ ಜಯ: 34 ಸಾವಿರ ಮತಗಳ ಅಂತರದಿಂದ ಕೈ ಅಭ್ಯರ್ಥಿಗೆ ಹೀನಾಯ ಸೋಲು)

Last Updated : Jun 16, 2022, 10:17 AM IST

ABOUT THE AUTHOR

...view details