ಕರ್ನಾಟಕ

karnataka

ETV Bharat / state

ನಾಳೆ ಕೇಂದ್ರ ಬಜೆಟ್: ರೈಲ್ವೆ ಯೋಜನೆಗಳಿಗೆ ಆಗ್ರಹಿಸಿ ಗಡಿಜಿಲ್ಲೆಯಲ್ಲಿ ತಮಟೆ ಚಳವಳಿ

ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಘೋಷಿಸಿದ್ದ ಚಾಮರಾಜನಗರ- ಹೆಜ್ಜಾಲ ರೈಲ್ವೆ ಯೋಜನೆ, ನನೆಗುದಿಗೆ ಬಿದ್ದಿರುವ ಚಾಮರಾಜನಗರ-ಮೆಟ್ಟುಪಾಳ್ಯಂ ಯೋಜನೆಗಳನ್ನು ಈ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

By

Published : Jul 4, 2019, 2:59 PM IST

ರೈಲ್ವೆ ಯೋಜನೆಗಳಿಗೆ ಆಗ್ರಹಿಸಿ ಚಾಮರಾಜನಗರದಲ್ಲಿ ತಮಟೆ ಪ್ರತಿಭಟನೆ ಮಾಡಿದರು.

ಚಾಮರಾಜನಗರ: ದಶಕಗಳ ಬೇಡಿಕೆಯಾದ ಮೆಟ್ಟುಪಾಳ್ಯಂ ಯೋಜನೆ ಮತ್ತು ಚಾಮರಾಜನಗರಕ್ಕೆ ಹೆಚ್ಚುವರಿ ರೈಲುಗಳನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಸಂಘಟನೆ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ರೈಲ್ವೆ ಯೋಜನೆಗಳಿಗೆ ಆಗ್ರಹಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ

ರೈಲ್ವೆ‌ ನಿಲ್ದಾಣದ ಹೊರಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ‌ ತಮಟೆ ಬಾರಿಸಿ ಚಾಮರಾಜನಗರ ಜಿಲ್ಲೆಯನ್ನು ಈ ಬಾರಿಯಾದರೂ ಬಜೆಟ್​ನಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಘೋಷಿಸಿದ್ದ ಚಾಮರಾಜನಗರ- ಹೆಜ್ಜಾಲ ರೈಲ್ವೆ ಯೋಜನೆ, ನನೆಗುದಿಗೆ ಬಿದ್ದಿರುವ ಚಾಮರಾಜನಗರ-ಮೆಟ್ಟುಪಾಳ್ಯಂ ಯೋಜನೆಗಳನ್ನು ಈ ಬಾರಿ ಅನುಷ್ಠಾನಗೊಳಿಸಬೇಕು. ಚಾಮರಾಜನಗರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಮೈಸೂರಿನಿಂದ ಹೆಚ್ಚುವರಿ ರೈಲುಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details