ಕರ್ನಾಟಕ

karnataka

ETV Bharat / state

ಶಾಸಕ ಮಹೇಶ್ ಕಾಲೆಳೆದ ನೆಟ್ಟಿಗರು

ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರಾಗಿ ಬಿಎಸ್​ಪಿಯಿಂದ ಉಚ್ಛಾಟನೆಗೊಂಡಿರುವ ಎನ್.ಮಹೇಶ್ ಪರ-ವಿರೋಧದ ಚರ್ಚೆಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿವೆ.

By

Published : Aug 31, 2019, 8:12 AM IST

Updated : Aug 31, 2019, 10:46 AM IST

ಶಾಸಕ ಮಹೇಶ್ ಹಾಗೂ ಮುಖಂಡ ಶಿವಕುಮಾರ್ ವಿರುದ್ದ ನಾಟಕ ಬರೆದ ನೆಟ್ಟಿಗರು

ಚಾಮರಾಜನಗರ: ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರಾಗಿ ಬಿಎಸ್​ಪಿಯಿಂದ ಉಚ್ಛಾಟನೆಗೊಂಡಿರುವ ಎನ್.ಮಹೇಶ್ ಪರ-ವಿರೋಧದ ಚರ್ಚೆಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿವೆ.

ಶಾಸಕ ಮಹೇಶ್ ಕಾಲೆಳೆದ ನೆಟ್ಟಿಗರು

ಶಾಸಕ ಎನ್.ಮಹೇಶ್ ಬಿಜೆಪಿಗೆ ಹೋಗುವರೋ ಇಲ್ಲಾ ಬಿಎಸ್​ಪಿ ಹೈಕಮಾಂಡ್ ಮನವೊಲಿಸುವುರೋ ಅಥವಾ ಸ್ವತಂತ್ರವಾಗಿರುವರೋ ಎಂಬುದರ ಕುರಿತು ಬೆಂಬಲಿಗರು ವಿಶೇಷವಾಗಿ ದಲಿತ ಸಮುದಾಯದ ಯುವಕರು ಪರ-ವಿರೋಧದ ಚರ್ಚೆಯಲ್ಲಿ ತೊಡಗಿದ್ದಾರೆ. ಕೆಲವರು "ಮದ್ದಾನೆ" ಎಂಬ ನಾಟಕ ಬರೆದು ಮಹೇಶ್ ಮತ್ತು ಪಕ್ಷದ ಯುವ ಮುಖಂಡ ಡಾ. ಶಿವಕುಮಾರ ಕಾಲೆಳೆದಿರುವುದು ಭಾರೀ ವೈರಲ್​​ ಆಗಿದೆ.

ವಿ.ಶ್ರೀನಿವಾಸಪ್ರಸಾದ್ ಅವರೊಂದಿಗೆ ದೊಡ್ಡಣ್ಣ( ಎನ್.ಮಹೇಶ್) ಅವರನ್ನು ಬಿಜೆಪಿಯವರು ಕರೆದೊಯ್ದಿದ್ದು,‌ ಶಿವಕುಮಾರ್ ಕೂಡ ಬಿಜೆಪಿಗೆ ಹೋಗುತ್ತಾರೆ ಎಂದು ಸಂಭಾಷಣೆ ರೂಪದಲ್ಲಿ ಬರೆದಿದ್ದಾರೆ. ಇತ್ತೀಚೆಗಷ್ಟೆ ಅಕ್ಕ ಐಎಎಸ್ ಅಕಾಡೆಮಿ‌ ಪ್ರಾರಂಭಿಸಿದ್ದ ಡಾ. ಶಿವಕುಮಾರ್ ಕುರಿತು ಬರೆದು ಹೀಗಾದರೆ ದಲಿತರು ಐಎಎಸ್ ಮಾಡುವುದು ಯಾವಾಗ, ಡಿಸಿ ಆಗುವುದು ಯಾವಾಗ ಎಂದು ಶಿವಕುಮಾರ್ ಅಭಿಮಾನಿಗಳ ಕಾಲೆಳೆದಿದ್ದಾರೆ.

Last Updated : Aug 31, 2019, 10:46 AM IST

ABOUT THE AUTHOR

...view details