ಚಾಮರಾಜನಗರ: ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರಾಗಿ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಎನ್.ಮಹೇಶ್ ಪರ-ವಿರೋಧದ ಚರ್ಚೆಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿವೆ.
ಶಾಸಕ ಮಹೇಶ್ ಕಾಲೆಳೆದ ನೆಟ್ಟಿಗರು
ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರಾಗಿ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಎನ್.ಮಹೇಶ್ ಪರ-ವಿರೋಧದ ಚರ್ಚೆಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿವೆ.
ಶಾಸಕ ಎನ್.ಮಹೇಶ್ ಬಿಜೆಪಿಗೆ ಹೋಗುವರೋ ಇಲ್ಲಾ ಬಿಎಸ್ಪಿ ಹೈಕಮಾಂಡ್ ಮನವೊಲಿಸುವುರೋ ಅಥವಾ ಸ್ವತಂತ್ರವಾಗಿರುವರೋ ಎಂಬುದರ ಕುರಿತು ಬೆಂಬಲಿಗರು ವಿಶೇಷವಾಗಿ ದಲಿತ ಸಮುದಾಯದ ಯುವಕರು ಪರ-ವಿರೋಧದ ಚರ್ಚೆಯಲ್ಲಿ ತೊಡಗಿದ್ದಾರೆ. ಕೆಲವರು "ಮದ್ದಾನೆ" ಎಂಬ ನಾಟಕ ಬರೆದು ಮಹೇಶ್ ಮತ್ತು ಪಕ್ಷದ ಯುವ ಮುಖಂಡ ಡಾ. ಶಿವಕುಮಾರ ಕಾಲೆಳೆದಿರುವುದು ಭಾರೀ ವೈರಲ್ ಆಗಿದೆ.
ವಿ.ಶ್ರೀನಿವಾಸಪ್ರಸಾದ್ ಅವರೊಂದಿಗೆ ದೊಡ್ಡಣ್ಣ( ಎನ್.ಮಹೇಶ್) ಅವರನ್ನು ಬಿಜೆಪಿಯವರು ಕರೆದೊಯ್ದಿದ್ದು, ಶಿವಕುಮಾರ್ ಕೂಡ ಬಿಜೆಪಿಗೆ ಹೋಗುತ್ತಾರೆ ಎಂದು ಸಂಭಾಷಣೆ ರೂಪದಲ್ಲಿ ಬರೆದಿದ್ದಾರೆ. ಇತ್ತೀಚೆಗಷ್ಟೆ ಅಕ್ಕ ಐಎಎಸ್ ಅಕಾಡೆಮಿ ಪ್ರಾರಂಭಿಸಿದ್ದ ಡಾ. ಶಿವಕುಮಾರ್ ಕುರಿತು ಬರೆದು ಹೀಗಾದರೆ ದಲಿತರು ಐಎಎಸ್ ಮಾಡುವುದು ಯಾವಾಗ, ಡಿಸಿ ಆಗುವುದು ಯಾವಾಗ ಎಂದು ಶಿವಕುಮಾರ್ ಅಭಿಮಾನಿಗಳ ಕಾಲೆಳೆದಿದ್ದಾರೆ.