ಕರ್ನಾಟಕ

karnataka

By

Published : Jan 9, 2022, 7:00 PM IST

ETV Bharat / state

ಚಾಮರಾಜನಗರದಲ್ಲಿ ಏರಿಕೆ ಕಂಡ ಕೊರೊನಾ: ಓಂ ಶಕ್ತಿಗೆ ತೆರಳಿದ 12 ಮಂದಿಗೆ ಸೋಂಕು

ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಿಂದ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದ 12 ಭಕ್ತರು ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ‌. ಮೂರು ಬಸ್​ಗಳಲ್ಲಿ ತೆರಳಿದ್ದ ಭಕ್ತಾದಿಗಳು ಗ್ರಾಮಕ್ಕೆ ಹಿಂತಿರುಗುವಾಗ ತಡೆದು 104 ಮಂದಿಗೆ ಸೋಂಕು ಪರೀಕ್ಷೆ ನಡೆಸಿದ ವೇಳೆ 12 ಮಂದಿಗೆ ಸೋಂಕು ದೃಢಪಟ್ಟಿದೆ.

corona
ಕೊರೊನಾ

ಚಾಮರಾಜನಗರ: ಒಂದಂಕಿಯಲ್ಲಿರುತ್ತಿದ್ದ ಕೊರೊನಾ ಪ್ರಕರಣಗಳು ಇಂದು ಎರಡಂಕಿಗೆ ಏರಿಕೆಯಾಗಿದ್ದು, ಓಂಶಕ್ತಿ ದೇಗುಲಕ್ಕೆ ತೆರಳಿದ 12 ಮಂದಿಗೆ ಸೋಂಕು ದೃಢಪಟ್ಟಿದೆ.

ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಿಂದ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದ 12 ಭಕ್ತರು ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ‌. ಮೂರು ಬಸ್​ಗಳಿಗೆ ತೆರಳಿದ್ದ ಭಕ್ತಾದಿಗಳು ಗ್ರಾಮಕ್ಕೆ ಹಿಂತಿರುಗುವಾಗ ತಡೆದು 104 ಮಂದಿಗೆ ಸೋಂಕು ಪರೀಕ್ಷೆ ನಡೆಸಿದ ವೇಳೆ 12 ಮಂದಿಗೆ ಸೋಂಕು ವಕ್ಕರಿಸಿದೆ.

ಇನ್ನು ಇಂದು 26 ಮಂದಿಗೆ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. 806 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇರಿಸಲಾಗಿದ್ದು, ಇಂದು ಒಂದೂವರೆ ಸಾವಿರಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಓದಿ:ಮೇಕೆದಾಟು ಪಾದಯಾತ್ರೆಗೆ ಚಾಲನೆ ಬಳಿಕ ಸರ್ಕಾರದ ವಿರುದ್ಧ ಸಿದ್ದರಾಮಯ್ಯ, ಡಿಕೆಶಿ ವಾಗ್ದಾಳಿ

ABOUT THE AUTHOR

...view details