ಚಾಮರಾಜನಗರ: ಒಂದಂಕಿಯಲ್ಲಿರುತ್ತಿದ್ದ ಕೊರೊನಾ ಪ್ರಕರಣಗಳು ಇಂದು ಎರಡಂಕಿಗೆ ಏರಿಕೆಯಾಗಿದ್ದು, ಓಂಶಕ್ತಿ ದೇಗುಲಕ್ಕೆ ತೆರಳಿದ 12 ಮಂದಿಗೆ ಸೋಂಕು ದೃಢಪಟ್ಟಿದೆ.
ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಿಂದ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದ 12 ಭಕ್ತರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಮೂರು ಬಸ್ಗಳಿಗೆ ತೆರಳಿದ್ದ ಭಕ್ತಾದಿಗಳು ಗ್ರಾಮಕ್ಕೆ ಹಿಂತಿರುಗುವಾಗ ತಡೆದು 104 ಮಂದಿಗೆ ಸೋಂಕು ಪರೀಕ್ಷೆ ನಡೆಸಿದ ವೇಳೆ 12 ಮಂದಿಗೆ ಸೋಂಕು ವಕ್ಕರಿಸಿದೆ.