ಕರ್ನಾಟಕ

karnataka

By

Published : May 30, 2022, 4:01 PM IST

ETV Bharat / state

ಚಾಮರಾಜನಗರದ ಹರಳುಕೋಟೆ ದೇವಾಲಯಕ್ಕೆ ಸಿಜೆಐ ಎನ್ ವಿ ರಮಣ ಭೇಟಿ

ಮೈಸೂರಿನಿಂದ ಚಾಮರಾಜನಗರಕ್ಕೆ ರಸ್ತೆ ಮಾರ್ಗವಾಗಿ ಬಂದ ನ್ಯಾ. ಎನ್​ ವಿ ರಮಣ ದಂಪತಿ ಆಗಮಿಸಿ ಹರಳುಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಚಾಮರಾಜನಗರದ ಹರಳುಕೋಟೆ ದೇವಾಲಯಕ್ಕೆ ಸಿಜೆಐ ಎನ್ ವಿ ರಮಣ ಭೇಟಿ
ಚಾಮರಾಜನಗರದ ಹರಳುಕೋಟೆ ದೇವಾಲಯಕ್ಕೆ ಸಿಜೆಐ ಎನ್ ವಿ ರಮಣ ಭೇಟಿ

ಚಾಮರಾಜನಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ‌ ರಮಣ ಚಾಮರಾಜನಗರದ ಹರಳುಕೋಟೆ ದೇವಾಲಯಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬಿಗಿ ಭದ್ರತೆಯಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ರಸ್ತೆ ಮಾರ್ಗವಾಗಿ ಬಂದ ರಮಣ ದಂಪತಿ ಹರಳುಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ನಗರದ ಆಧ್ಯಾತ್ಮಿಕ ಗುರುವೊಬ್ಬರ ಮನೆಗೆ ಭೇಟಿ ಕೊಟ್ಟ ಅವರು, ಕೆಲವು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು ಎಂದು ತಿಳಿದುಬಂದಿದೆ. ಸಂಜೆ ಬಂಡೀಪುರಕ್ಕೆ ಭೇಟಿ ನೀಡುವ ನ್ಯಾಯಮೂರ್ತಿಗಳು ದ ಸರಾಯ್ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಭೇಟಿ ಮತ್ತು ಭದ್ರತಾ ದೃಷ್ಟಿಯಿಂದ ದೇವಾಲಯ ಮತ್ತು ಇನ್ನಿತರ ಅವರ ಕಾರ್ಯಗಳಿಗೆ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು.

ಓದಿ:ಬ್ಯಾಂಕಿಂಗ್ ವಹಿವಾಟಿನಲ್ಲಿ ತೊಂದರೆ : ಪೆಟ್ರೋಲ್ ಬಂಕ್ ಮಾಲೀಕರಿಂದ ಮೇ 31ರಂದು ಪ್ರತಿಭಟನೆ

For All Latest Updates

TAGGED:

ABOUT THE AUTHOR

...view details