ಚಾಮರಾಜನಗರ:ಅರಿಶಿಣದ ನಡುವೆ ಗಾಂಜಾ ಬೆಳೆದಿದ್ದನ್ನು ಪತ್ತೆಹಚ್ಚಿ ನೂರಾರು ಕೆಜಿ ಮಾದಕವಸ್ತು ವಶಪಡಿಸಿಕೊಂಡಿರುವ ಘಟನೆ ಹನೂರು ತಾಲೂಕಿನ ನಾಗನಕಟ್ಟೆ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಅರಿಶಿಣದ ನಡುವೆ ಗಾಂಜಾ: ಬರೋಬ್ಬರಿ 290 ಕೆಜಿ ಮಾದಕವಸ್ತು ವಶ
ಅಕ್ರಮವಾಗಿ ಬೆಳೆ ನಡುವೆ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಹನೂರು ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಅರಿಶಿಣದ ನಡುವೆ ಗಾಂಜಾ: ಬರೋಬ್ಬರಿ 290 ಕೆಜಿ ಮಾದಕವಸ್ತು ವಶ
ಗ್ರಾಮದ ವಡಿವೇಲು(35) ಎಂಬಾತ ಅಕ್ರಮವಾಗಿ ಬೆಳೆ ನಡುವೆ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಹನೂರು ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 290 ಕೆ.ಜಿ ತೂಕದ 120 ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.