ಕರ್ನಾಟಕ

karnataka

ಪ್ರತಿಪಕ್ಷದ ನಾಯಕರಿಗೆ ಟ್ವೀಟ್​​ನಲ್ಲಿ ಟಾಂಗ್ ಕೊಟ್ಟ ಸಿಎಂ

ಗ್ರಾಮ ವಾಸ್ತವ್ಯ ಕುರಿತು ವಿರೋಧ ಪಕ್ಷದ ನಾಯಕರ ಟೀಕೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್​ ಮೂಲಕವೇ ಟಾಂಗ್ ಕೊಟ್ಟಿದ್ದಾರೆ.

By

Published : Jun 22, 2019, 8:07 PM IST

Published : Jun 22, 2019, 8:07 PM IST

ಸಿಎಂ ಟ್ವೀಟ್

ಬೆಂಗಳೂರು : 'ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ ಎಂಬ ಕುವೆಂಪು ಅವರ ಸಾಲುಗಳ ಜೊತೆಗೆ, ಗ್ರಾಮ ವಾಸ್ತವ್ಯ ಕುರಿತು ವಿರೋಧ ಪಕ್ಷದ ನಾಯಕರ ಹುರುಳಿಲ್ಲದ ಟೀಕೆಗೆ ಇದೇ ನನ್ನ ಉತ್ತರ' ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್​ ಮೂಲಕ ಪ್ರತಿಪಕ್ಷದ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ಸಿಎಂ ಟ್ವೀಟ್

ಸರ್ಕಾರ ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ನಾನು ನಿನ್ನೆ ಗ್ರಾಮ ವಾಸ್ತವ್ಯ ಮಾಡಿರುವುದು ಸಹ ಬರಪೀಡಿತ ಯಾದಗಿರಿ ಜಿಲ್ಲೆಯಲ್ಲೇ. ಆ ಮೂಲಕ ಜನರ ಸಂಕಷ್ಟಗಳನ್ನು ಸಹ ಅರಿತಿದ್ದೇನೆ. ಅದಕ್ಕೆ ಪರಿಹಾರವನ್ನೂ ಒದಗಿಸಲಾಗುತ್ತಿದೆ. ಪ್ರತಿಪಕ್ಷದ ನಾಯಕರು ಒಂದೆಡೆ ಅಧಿಕಾರಿಗಳ ಬೆನ್ನುತಟ್ಟಿ, ಮಾಧ್ಯಮಗಳ ಮುಂದೆ ಭಿನ್ನರಾಗ ಹಾಡುವುದು ಅವರ ದ್ವಂದ್ವ ನೀತಿಯನ್ನು ಬಿಂಬಿಸುತ್ತದೆ ಎಂದು ಟ್ವೀಟ್​​ನಲ್ಲಿ ವ್ಯಂಗ್ಯವಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details