ಬಸವಕಲ್ಯಾಣ (ಬೀದರ್):ಬಸವಕಲ್ಯಾಣದ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿದೆ. ವಿವಿಧ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿಯಿಂದ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ವಸತಿ ಸಚಿವ ವಿ.ಸೋಮಣ್ಣ, ಪ್ರಚಾರದ ನಡುವೆ ಹೋಟೆಲ್ವೊಂದಕ್ಕೆ ತೆರಳಿ ಪಾಪಡ್ ಮತ್ತು ಜಾಮೂನು ಸವಿದರು.
ಪ್ರಚಾರದ ನಡುವೆ ಪಾಪಡ್, ಜಾಮೂನು ಸವಿದು ರಿಲ್ಯಾಕ್ಸ್ ಆದ್ರು ವಿ.ಸೋಮಣ್ಣ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರವಾಗಿ ಮತಯಾಚಿಸಲು ಕಳೆದ ಒಂದು ವಾರದಿಂದ ನಗರದಲ್ಲಿಯೇ ವಾಸ್ತವ್ಯ ಹೂಡಿರುವ ವಿ.ಸೋಮಣ್ಣ, ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಮಮತಾ ಸ್ವೀಟ್ಸ್ ಮಾರ್ಟ್ಗೆ ತೆರಳಿ ಪಾಪಡ್ ಮತ್ತು ಜಾಮೂನು ಸವಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಬಿಜೆಪಿ ಮುಖಂಡರಾದ ಡಾ.ಶೈಲೇಂದ್ರ ಬೆಲ್ದಾಳೆ, ಸೂರ್ಯಕಾಂತ ನಾಗಪಾರಮಳ್ಳಿ, ಗುಂಡು ರೆಡ್ಡಿ, ಪ್ರದೀಪ ವಾತಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಓದಿ:ನಾಮದೇವ ಸಿಂಪಿ ಸಮುದಾಯ ಪ್ರವರ್ಗ-1ಕ್ಕೆ ಸೇರಿಸಲು ಸಿಎಂಗೆ ಮನವಿ