ಕರ್ನಾಟಕ

karnataka

ETV Bharat / state

ಶಾಲೆಗೆ ಬೀಗ ಹಾಕಿ ಹೆಡ್​ಮಾಸ್ಟರ್​ ಚಕ್ಕರ್​.... ಕಾದು ಸುಸ್ತಾದ ವಿದ್ಯಾರ್ಥಿಗಳು

ಜಿಲ್ಲೆಯ ಉಡಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮುಖ್ಯ ಶಿಕ್ಷಕರೊಬ್ಬರು ಶಾಲೆಯ ಕೀ ಇಟ್ಟಕೊಂಡು ಶಾಲೆಗೆ ಚಕ್ಕರ್​ ಹೊಡೆದಿದ್ದು,ಇದರಿಂದಾಗಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಮಧ್ಯಾಹ್ನದವರೆಗೆ ಶಿಕ್ಷಕರಿಗಾಗಿ ಕಾದು ಸುಸ್ತಾಗಿ ಶಾಲೆಯ ಆವರಣದಲ್ಲೆ ಕಾದು ಕುಳಿತಿದ್ದ ಘಟನೆ ನಡೆದಿದೆ.

By

Published : Jul 4, 2019, 2:42 AM IST

ಶಾಲೆಗೆ ಬೀಗ ಹಾಕಿ ಹೆಡ್​ಮಾಸ್ಟರ್​ ಚಕ್ಕರ್​.... ಕಾದು ಸುಸ್ತಾದ ವಿದ್ಯಾರ್ಥಿಗಳು

ಬೀದರ್:ಮುಖ್ಯ ಶಿಕ್ಷಕರೊಬ್ಬರು ಜೇಬಿನಲ್ಲಿ ಶಾಲೆಯ ಕೀಯನ್ನು ತಮ್ಮ ಬಳಿಯೇ ಇಟ್ಕೊಂಡು ಶಾಲೆಗೆ ಚಕ್ಕರ್ ಹೊಡೆದ ಪರಿಣಾಮ ನೂರಕ್ಕೂ ಅಧಿಕ ವಿಧ್ಯಾರ್ಥಿಗಳು ಶಿಕ್ಷಕರಿಗಾಗಿ ಕಾದು ಕಾದು ಸುಸ್ತಾಗಿ ಶಾಲೆ ಆವರಣದಲ್ಲೆ ಕಂಗಾಲಾಗಿ ಕುಳಿತಂತ ಘಟನೆ ನಡೆದಿದೆ.

ಶಾಲೆಗೆ ಬೀಗ ಹಾಕಿ ಹೆಡ್​ಮಾಸ್ಟರ್​ ಚಕ್ಕರ್​.... ಕಾದು ಸುಸ್ತಾದ ವಿದ್ಯಾರ್ಥಿಗಳು

ಜಿಲ್ಲೆಯ ಹುಮನಾಬಾದ್ ತಾಲೂಕಿನ ಉಡಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮುಖ್ಯ ಶಿಕ್ಷಕರೊಬ್ಬರು ಶಾಲೆಯ ಕೀ ತಮ್ಮಬಳಿ ತೆಗೆದುಕೊಂಡು ಹೋಗಿದ್ದು, ಶಾಲೆಗೆ ಚಕ್ಕರ್ ಹೊಡೆದಿದ್ದಾರೆ. ಇದರಿಂದಾಗಿ ನೂರಕ್ಕೂ ಅಧಿಕ ವಿಧ್ಯಾರ್ಥಿಗಳು ಮಧ್ಯಾಹ್ನದವರೆಗೆ ಶಿಕ್ಷಕರಿಗಾಗಿ ಕಾದು ಸುಸ್ತಾಗಿ ಶಾಲೆಯ ಆವರಣದಲ್ಲೆ ಕಾದು ಕುಳಿತ್ತಿದ್ದಾರೆ. ವಿದ್ಯಾರ್ಥಿಗಳ ಜೊತೆ ಇನ್ನುಳಿದ ಶಿಕ್ಷಕರು ಕೂಡ ಶಾಲೆಯ ಆವರಣದಲ್ಲೆ ಕಾದಿದ್ದಾರೆ. ಆದರೆ ಶಾಲೆ ಬಿಡುವ ವೇಳೆಗೆ ಮುಖ್ಯಶಿಕ್ಷಕರು ಬೀಗದ ಕೀ ಕೊಟ್ಟಿದ್ದು, ಇವರ ನಡೆಯನ್ನ ಖಂಡಿಸಿ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಪ್ರತಿ ನಿತ್ಯವೂ ಶಾಲೆಯ ದುರಾಡಳಿತದಿಂದ ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಶಾಲೆಯಲ್ಲಿನ ವಾಸ್ತವ ಸ್ಥಿತಿಯ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

For All Latest Updates

ABOUT THE AUTHOR

...view details