ಕರ್ನಾಟಕ

karnataka

ETV Bharat / state

ಶಾಲೆಗೆ ಚಕ್ಕರ್ ಹಾಕ್ತಿದ್ದ ಹೆಡ್​ಮಾಸ್ಟರ್ ಸಸ್ಪೆಂಡ್​... ಈಟಿವಿ ಭಾರತ ಇಂಪ್ಯಾಕ್ಟ್

ಬೀದರ್ ತಾಲೂಕು ರಾಜನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಸೇರಿದಂತೆ 7 ಜನ ಶಿಕ್ಷಕರ ಗುಂಪು ಶಾಲೆಗೆ ಚಕ್ಕರ್ ಹಾಕಿ ಬಾಡಿಗೆ ಶಿಕ್ಷಕರಿಂದ ಮಕ್ಕಳಿಗೆ ಪಾಠ ಹೇಳಿಸುತ್ತಿರುವುದನ್ನುಈಟಿವಿ ಭಾರತ ಬಯಲಿಗೆಳೆದ ಬೆನ್ನಲ್ಲೇ ಹೆಡ್​​ಮಾಸ್ಟರ್​ಗೆ ತಕ್ಕೆ ಶಿಕ್ಷೆಯಾಗಿದೆ.​​ ಡಿಡಿಪಿಐ ಅವರು ಎಚ್ಚೆತ್ತುಕೊಂಡು ಶಾಲೆಗೆ ದಿಢೀರ್​ ಭೇಟಿ ನೀಡಿ ಮುಖ್ಯಶಿಕ್ಷಕ​ ಎಂ.ಡಿ. ಇಸಾಕ್​ರನ್ನ ಅಮಾನತುಗೊಳಿಸಿದ್ದಾರೆ.

By

Published : Aug 2, 2019, 12:51 AM IST

ಮಕ್ಕಳಿಗೆ ಬಾಡಿಗೆ ಶಿಕ್ಷಕರಿಂದ ಪಾಠ..ಶಾಲೆಗೆ ಚಕ್ಕರ್ ಹಾಕ್ತಿದ್ದ ಹೆಡ್​ಮಾಸ್ಟರ್ ಸಸ್ಪೆಂಡ್​..ಇದು ಈಟಿವಿ ಭಾರತದ ಇಂಪ್ಯಾಕ್ಟ್!

ಬೀದರ್: ಈಟಿವಿ ಭಾರತ ವರದಿಜಿಲ್ಲೆಯಲ್ಲಿ ನಿರ್ಲಕ್ಷ್ಯ ತೋರುವ ಶಿಕ್ಷಕರಿಗೆ ಬಿಸಿ ಮುಟ್ಟಿಸಿದೆ. ರಾಜನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಡಿಡಿಪಿಐ ಹೆಚ್​ ಸಿ ಚಂದ್ರಶೇಖರ್​ ದಿಢೀರ್​​ ಭೇಟಿ ನೀಡಿ ಅಲ್ಲಿನ ಹೆಡ್​​ಮಾಸ್ಟರ್​ ಸೇರಿದಂತೆ ಶಿಕ್ಷಕರಿಗೆ ಬೆವರಿಳಿಸಿದ್ದಾರೆ.

ಮುಖ್ಯ ಶಿಕ್ಷಕ ಸೇರಿದಂತೆ 7 ಜನ ಶಿಕ್ಷಕರ ಗುಂಪು ಶಾಲೆಗೆ ಚಕ್ಕರ್ ಹೊಡೆದು ಬಾಡಿಗೆ ಶಿಕ್ಷಕರಿಂದ ಮಕ್ಕಳಿಗೆ ಪಾಠ ಹೇಳಿಸುತ್ತಿರುವುದನ್ನು ನಮ್ಮ 'ಈಟಿವಿ ಭಾರತ' ವೆಬ್​ಚಾನೆಲ್​ನಲ್ಲಿ ವಿಸ್ತೃತ ವರದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಶಾಲೆಯಲ್ಲಿ ನಡೆಯುತ್ತಿದ್ದ ಅನಧಿಕೃತ ಚಟುವಟಿಕೆಗೆಳಿಗೆ ಬ್ರೇಕ್​ ಬಿದ್ದಿದೆ. ಅಲ್ಲದೆ, ವರದಿಯಿಂದ ಎಚ್ಚೆತ್ತುಕೊಂಡಿರುವ ಡಿಡಿಪಿಐ ಅವರು ಮುಖ್ಯಶಿಕ್ಷಕ​ ಎಂ.ಡಿ. ಇಸಾಕ್​ರನ್ನ ಸಸ್ಪೆಂಡ್​ ಮಾಡಿದ್ದಾರೆ.

ಮಕ್ಕಳಿಗೆ ಬಾಡಿಗೆ ಶಿಕ್ಷಕರಿಂದ ಪಾಠ..ಶಾಲೆಗೆ ಚಕ್ಕರ್ ಹಾಕ್ತಿದ್ದ ಹೆಡ್​ಮಾಸ್ಟರ್ ಸಸ್ಪೆಂಡ್​..ಇದು ಈಟಿವಿ ಭಾರತದ ಇಂಪ್ಯಾಕ್ಟ್

ಇದು ಈಟಿವಿ ಭಾರತ್​ ಇಂಪ್ಯಾಕ್ಟ್...!
ಈ ಕುರಿತು 'ಶಾಲೆಗೆ ಸರ್ಕಾರಿ ಶಿಕ್ಷಕರು ಚಕ್ಕರ್...ಮಕ್ಕಳಿಗೆ ಬಾಡಿಗೆ ಶಿಕ್ಷಕರಿಂದ ಪಾಠ!' ಎಂಬ ತಲೆ ಬರಹದಡಿ ಈಟಿವಿ ಭಾರತ್​ನಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ, ಡಿಡಿಪಿಐ ಹೆಚ್.ಸಿ ಚಂದ್ರಶೇಖರ್ ಅವರು ಶಿಸ್ತಕ್ರಮ ಕೈಗೊಂಡಿದ್ದಾರೆ.

ಶಾಲೆಯ ಕಚೇರಿಯಲ್ಲಿ ಕೂರಲಿಕ್ಕೆ ಕುರ್ಚಿ ಕೂಡ ಇರಲಿಲ್ಲ. ಈ ಬಗ್ಗೆ ಮುಖ್ಯಶಿಕ್ಷರನ್ನ ತರಾಟೆಗೆ ತೆಗೆದುಕೊಂಡ ಡಿಡಿಪಿಐ, ಪಕ್ಕದ ಬೆಂಚ್ ಮೇಲೆ ಕುಳಿತರು. ಇವರು ಭೇಟಿ ನೀಡಿದ ಸಂದರ್ಭದಲ್ಲೂ ಬಾಡಿಗೆ ಶಿಕ್ಷಕಿಯರು ಕೆಲಸ ಮಾಡುವುದು ಕಂಡುಬಂತು. ಇನ್ನು, ಮಕ್ಕಳಿಗೆ ಯಾವ ಪಾಠ ಎಲ್ಲಿಗೆ ಬಂದಿದೆ ಅಂತ ಕೇಳಿದ್ರೆ, ಅವರು ಗೊಂದಲದಲ್ಲಿ ಉತ್ತರಿಸಿದ್ದು, ಈ ವೇಳೆ ಕ್ಲಾಸ್​ನಲ್ಲಿದ್ದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ್ರು.

ಇನ್ನು, ಶಾಲೆಯ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ ಡಿಡಿಪಿಐ ಅವರು, ಮುಖ್ಯಶಿಕ್ಷಕ​ ಎಂ.ಡಿ. ಇಸಾಕ್​ರನ್ನ ಅಮಾನತುಗೊಳಿಸಿ, ಇನ್ನುಳಿದ ಶಿಕ್ಷಕರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಒಟ್ಟಾರೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಜಿಲ್ಲೆಯಲ್ಲಿ ಇನ್ನುಳಿದ ಶಾಲೆಗಳ ಪರಿಸ್ಥಿತಿ ಹೇಗಿದೆ ಅನ್ನುವುದರ ಬಗ್ಗೆಯೂ ಡಿಡಿಪಿಐ ಅವರು ಗಮನ ಹರಿಸಬೇಕಿದೆ. ನಮ್ಮ ವರದಿಗೆ ಸ್ಪಂದಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿರುವ ಡಿಡಿಪಿಐ ಚಂದ್ರಶೇಖರ್ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಇದೇ ರೀತಿ ಅವರು ನಿರ್ಲಕ್ಷ್ಯ ವಹಿಸುತ್ತಿರುವ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಹಿಂದುಳಿದ ಜಿಲ್ಲೆಯಲ್ಲಿ ಶೈಕ್ಷಣಿಕ ಮಟ್ಟ ಸುಧಾರಿಸಲು ಮುಂದಾಗಲಿ ಎಂದು ಈಟಿವಿ ಭಾರತ ತಂಡ ಆಶಿಸುತ್ತದೆ.

ABOUT THE AUTHOR

...view details