ಕರ್ನಾಟಕ

karnataka

ETV Bharat / state

ಹೊರ ರಾಜ್ಯದಿಂದ ಬಂದ 500 ಕಾರ್ಮಿಕರು: ವಲಸಿಗರಿಗೆಲ್ಲ ಕ್ವಾರಂಟೈನ್​​

ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ 500ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಬಸವ ಕಲ್ಯಾಣದ ಚಂಡಕಾಪೂರ ಚೆಕ್‌ಪೋಸ್ಟ್​​ನಲ್ಲಿ ತಪಾಸಣೆ ನಡೆಸಿ ಕ್ವಾರಂಟೈನ್​​​​ಗೆ ಕಳುಹಿಸಲಾಗಿದೆ.

By

Published : May 11, 2020, 4:31 PM IST

More than 500 migrant workers to Quarantine
ವಲಸೆ ಕಾರ್ಮಿಕರು

ಬಸವಕಲ್ಯಾಣ: ಸರ್ಕಾರದ ಆದೇಶ ಹಿನ್ನೆಲೆ ಮುಂಬೈ, ಪುಣೆ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ 500ಕ್ಕೂ ವಲಸೆ ಕಾರ್ಮಿಕರನ್ನು ತಾಲೂಕಿನ ಚಂಡಕಾಪೂರ ಚೆಕ್‌ಪೋಸ್ಟ್​​ನಲ್ಲಿ ತಪಾಸಣೆ ನಡೆಸಿ ಕ್ವಾರಂಟೈನ್​ ಕೇಂದ್ರಕ್ಕೆ ಕಳುಹಿಸಲಾಗಿದೆ.

ಮೂರು ದಿನಗಳಿಂದ ನೂರಾರು ಮಂದಿ ರಾಜ್ಯಕ್ಕೆ ಬರುತ್ತಿದ್ದಾರೆ. ಗಡಿ ಪ್ರವೇಶಿಸುವ ಪ್ರತಿಯೊಬ್ಬರ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಶುಕ್ರವಾರ 173, ಶನಿವಾರ 240, ಭಾನುವಾರ 500ಕ್ಕೂ ಹೆಚ್ಚು ಕಾರ್ಮಿಕರು ರಾಜ್ಯದ ಗಡಿ ದಾಟಿದ್ದಾರೆ.

ವಲಸೆ ಕಾರ್ಮಿಕರು

ಬೇರೆ ಜಿಲ್ಲೆಯ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರಲ್ಲಿ ಕೆಮ್ಮು, ಜ್ವರ, ನೆಗಡಿ, ಉಸಿರಾಟದ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

ಚೆಕ್​ಪೋಸ್ಟ್​​ ಬಳಿಗೆ ಹೋದರೆ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸುತ್ತಾರೆ ಎಂಬ ಭಯದಿಂದ ಕೆಲವರು ಗಡಿಗೆ ತಲುಪುವ ಮುನ್ನವೇ ಮಾರ್ಗ ಮಧ್ಯ ವಾಹನಗಳಿಂದ ಇಳಿದು ಕಾಲ್ನಡಿಗೆ ಮೂಲಕ ಮನೆ ಸೇರುತ್ತಿದ್ದಾರೆ.

ಆದರೆ, ಗ್ರಾಮಕ್ಕೆ ಹೊಸದಾಗಿ ಬಂದವರ ಕುರಿತು ಸ್ಥಳೀಯ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಮಾಹಿತಿ ಪಡೆಯುತ್ತಿದ್ದಾರೆ. ಹೊಸದಾಗಿ ಬಂದವರ ಮಾಹಿತಿ ತಿಳಿದು ಬಂದರೆ ಕ್ವಾರಂಟೈನ್ ಕೇಂದ್ರಗಳಿಗೆ ದಾಖಲಿಸುತ್ತಿದ್ದಾರೆ.

ABOUT THE AUTHOR

...view details