ಕರ್ನಾಟಕ

karnataka

By

Published : Aug 31, 2020, 11:38 PM IST

ETV Bharat / state

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಬೆನ್ನಿಗಿತ್ತು ಬೀದರ್​ನ​ ಈ ದೈವ ಶಕ್ತಿ...!

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಯಾವುದೇ ಹೊಸ ಕಾರ್ಯ ಮಾಡುವಾಗ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ರೇಕುಳಗಿ ಗ್ರಾಮದ ಶಂಭುಲಿಂಗೇಶ್ವರ ಆರ್ಶೀವಾದ ಪಡೆಯುತ್ತಿದ್ದು, ಶಂಭುಲಿಂಗೇಶ್ವರನನ್ನು ಅಪಾರವಾಗಿ ನಂಬಿದ್ದರು.

Former President Pranab Mukherjee believed shambulingeshwara god
ಬೀದರ್​ನ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಪ್ರಣಬ್​ ಮುಖರ್ಜಿ

ಬೀದರ್:ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರು ಬೀದರ್​ನ ರೇಕುಳಗಿ ಶಂಭುಲಿಂಗೇಶ್ವರನ್ನು ಹೆಚ್ಚು ನಂಬಿದ್ದರು. ಎಷ್ಟರ ಮಟ್ಟಿಗೆ ಅಂದರೆ ಯುಪಿಎ ಅಭ್ಯರ್ಥಿಯಾಗಿ ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಶ್ರೀ ಶಂಭುಲಿಂಗೇಶ್ವರ ಆಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದರು.

ಬೀದರ್​ನ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಪ್ರಣಬ್​ ಮುಖರ್ಜಿ
ಬೀದರ್​ನ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಪ್ರಣಬ್​ ಮುಖರ್ಜಿ

2012ರ ಜೂನ್ 28ರಂದು ಭಾರತದ ರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್​ನ ಹಿರಿಯ ನಾಯಕ ಪ್ರಣಬ್ ಮುಖರ್ಜಿ 11 ಗಂಟೆಗೆ ನಾಮಪತ್ರ ಸಲ್ಲಿಸಿದರೆ, ಅದೇ ವೇಳೆಗೆ ಅವರ ಸೊಸೆ ಚಿತ್ರಲೇಖಾ ಹಾಗೂ ಮೊಮ್ಮಗ ಅರ್ಜುನ್ ಅವರು ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ರೇಕುಳಗಿ ಗ್ರಾಮದ ಶಂಭುಲಿಂಗೇಶ್ವರ ಸನ್ನಿಧಿಯಲ್ಲಿ ಪೂಜಾ ವಿಧಿ-ವಿಧಾನಗಳು ನಡೆಸಿದ್ದರು. ಈ ವೇಳೆ ತಮಿಳನಾಡು ಮೂಲದ ಆಗಿನ ಸಂಸದ ಹಾರುಣ ರೋಷ್ ಹಾಗೂ ಆಗಿನ ಮೈಸೂರಿನ ಸಂಸದ ಹೆಚ್.ವಿಶ್ವನಾಥ್ ಅವರ ಕುಟುಂಬದ ಸದಸ್ಯರೊಂದಿಗೆ ಉಪಸ್ಥಿತರಿದ್ದರು.

ಬೀದರ್​ನ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಪ್ರಣಬ್​ ಮುಖರ್ಜಿ
ಬೀದರ್​ನ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಪ್ರಣಬ್​ ಮುಖರ್ಜಿ

ಪ್ರಣಬ್​ ಮುಖರ್ಜಿ ಅವರು ಯಾವುದೇ ಹೊಸ ಕಾರ್ಯ ಮಾಡುವಾಗ ಶಂಭುಲಿಂಗೇಶ್ವರ ಆಶೀರ್ವಾದ ಪಡೆದೆ, ಮುಂದಿನ ಹೆಜ್ಜೆ ಹಾಕುತ್ತಿದ್ದರು. ಹೀಗಾಗಿ ಹಲವು ಬಾರಿ ರೇಕುಳಗಿ ಗ್ರಾಮದ ಶಂಭುಲಿಂಗೇಶ್ವರನ ಆಸ್ಥಾನಕ್ಕೆ ಯಾರಿಗೂ ಗೊತ್ತಾಗದೆ ಹಾಗೆ ಬಂದು ಹೋಗುತ್ತಿದ್ದರು.

ಬೀದರ್​ನ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಪ್ರಣಬ್​ ಮುಖರ್ಜಿ


ಪೂಜ್ಯ ಎನ್.ವಿ.ರೆಡ್ಡಿ ಅವರ ಮಾರ್ಗದರ್ಶನ: ಬೀದರ್ ಮೂಲದವರಾದ ಶಂಭುಲಿಂಗೇಶ್ವರ ದೇವಸ್ಥಾನದ ಪೂಜ್ಯ ಎನ್.ವಿ.ರೆಡ್ಡಿ ಅವರು ಪ್ರಣಬ್​ ಮುಖರ್ಜಿ ಅವರ ಮನೆಯ ಬಹುತೇಕ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶದಂತೆ ಹಲವು ಕಾರ್ಯಗಳನ್ನು ಕೈಗೊಳ್ಳುತ್ತಿದ್ದರು.

ABOUT THE AUTHOR

...view details