ಕರ್ನಾಟಕ

karnataka

ETV Bharat / state

ಮೋದಿ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ: ಹನುಮಂತಯ್ಯ

ಸೇನಾ ಶೌರ್ಯ ಮತ್ತು ಕಾರ್ಯದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ ಮತ್ತೆ ಕಿಡಿಕಾರಿದೆ. ಸೈನ್ಯದ ಗೌಪ್ಯತೆ ಕಾಪಾಡಬೇಕಿದ್ದ ಪ್ರಧಾನಿ, ಸಾರ್ವಜನಿಕ‌ ಸ್ಥಳಗಳಲ್ಲಿ ಸೇನೆಯ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಸ್ವಿಸ್​ ಬ್ಯಾಂಕ್​ನಲ್ಲಿ ಬಿಜೆಪಿಯವರ ಕಪ್ಪು ಹಣ ಇರುವುದರಿಂದಲೇ ಮೋದಿಯವರು ದೇಶಕ್ಕೆ ಬ್ಲ್ಯಾಕ್​ ಮನಿ ತರುತ್ತಿಲ್ಲವೆಂದು ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಆರೋಪಿಸಿದ್ದಾರೆ.

By

Published : Apr 21, 2019, 8:05 AM IST

ಹನುಮಂತಯ್ಯ

ಬಳ್ಳಾರಿ: ಸ್ವಿಸ್​ ಬ್ಯಾಂಕ್​ನಲ್ಲಿ ಭಾರತದ ಶೇ. 54 ರಷ್ಟು ಹಣದ ಪ್ರಮಾಣ ಹೆಚ್ಚಾಗಿದೆ. ಅದರಲ್ಲಿ ಬಿಜೆಪಿ ಹಣ ಇದ್ದುದರಿಂದ ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣವನ್ನು ಸ್ವಿಸ್​ ಬ್ಯಾಂಕ್​ನಿಂದ ತಂದಿಲ್ಲವೆಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಆರೋಪಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬೇಕೆ ಅಥವಾ ಭಯದ ವಾತಾವರಣ ಬೇಕೆ ಎಂದು ನಾನು ಜನರನ್ನು ಪ್ರಶ್ನಿಸುತ್ತಿರುವುದಾಗಿ ತಿಳಿಸಿದರು.

ಕೇಂದ್ರದಲ್ಲಿ ಹಣಕಾಸು ಸಚಿವ ಇದ್ದರೂ ನೋಟು ರದ್ದು ಮಾಡಿದ್ದು ಮೋದಿ. ದೇಶದ ರಾಜಕೀಯವನ್ನು ಜನರಲ್ಲಿ ಮಟ್ಟ ಹಾಕುವ ಕೆಲಸವನ್ನು ನರೇಂದ್ರ ಮೋದಿ ಮತ್ತು ಬಿಜೆಪಿಯವರು ಮಾಡ್ತಾ ಇದ್ದಾರೆ ಎಂದು ದೂರಿದರು.

ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ

ಜನರನ್ನು ಯಾಮಾರಿಸುವ ಪ್ರಯತ್ನವನ್ನು ನರೇಂದ್ರ ಮೋದಿ ಮಾಡಿದ್ದಾರೆ. ದೇಶದಲ್ಲಿ ನಿರುದ್ಯೋಗ, ಬಡತನ ಸಮಸ್ಯೆಗಳು ತಾಂಡವವಾಡುತ್ತಿವೆ.ಸೈನ್ಯದ ಗೌಪ್ಯತೆ ಕಾಪಾಡಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ‌ ಸ್ಥಳಗಳಲ್ಲಿ ಸೈನ್ಯದ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಕಲಿ ಮತ್ತು ನಿಜವಾದ ರಾಷ್ಟ್ರಭಕ್ತರ ನಡುವಿನ ಹೋರಾಟ ಇದಾಗಿದೆ. ನಿಜವಾದ ರಾಷ್ಟ್ರಭಕ್ತರು ತಮ್ಮ ಕೆಲಸ ಮಾಡ್ತಾ ಇದ್ದಾರೆ. ಆದ್ರೆ ಬಿಜೆಪಿಯವರು ನಕಲಿ ರಾಷ್ಟ್ರಭಕ್ತರು ಎಂದು ಹನುಮಂತಯ್ಯ ಟೀಕಿಸಿದರು.

ABOUT THE AUTHOR

...view details