ಕರ್ನಾಟಕ

karnataka

ETV Bharat / state

ರಾಜಭಾರತಿ ಸ್ವಾಮೀಜಿ ಭೇಟಿಯಾದ ಕಂಪ್ಲಿ ಶಾಸಕ ಗಣೇಶ ಕುಟುಂಬ!

ದೇವರಕೊಳ್ಳ ಗುಡ್ಡದ ‌ಅನ್ನಪೂರ್ಣೇಶ್ವರಿ ಮಠದ ದಿಗಂಬರ ರಾಜಭಾರತಿ ಸ್ವಾಮೀಜಿ ಅವರನ್ನ ಕಂಪ್ಲಿ ಶಾಸಕ ಗಣೇಶ ಹಾಗೂ ಕುಟುಂಬ ಸದಸ್ಯರು ಭೇಟಿಯಾಗಿ ಆರ್ಶೀವಾದ ಪಡೆದರು.

By

Published : Apr 28, 2019, 4:46 PM IST

ದಿಗಂಬರ ರಾಜಭಾರತಿ ಸ್ವಾಮೀಜಿ

ಬಳ್ಳಾರಿ: ಸಂಡೂರು ತಾಲೂಕಿನ ದೇವರಕೊಳ್ಳ ಗುಡ್ಡದ ಮೇಲಿನ ಅನ್ನಪೂರ್ಣೇಶ್ವರಿ ಮಠದರಾಜಭಾರತಿ ಸ್ವಾಮೀಜಿಯವರನ್ನ ಶಾಸಕ‌ ಗಣೇಶ, ಪತ್ನಿ ಹಾಗೂ ಮಕ್ಕಳು ಭೇಟಿಯಾಗಿ ಆಶೀರ್ವಾದ ಪಡೆದರು.

ಶಾಸಕ ಗಣೇಶ ಮತ್ತು ಕುಟುಂಬ ಸದಸ್ಯರು ಸ್ವಾಮೀಜಿ ಎದುರು ಕುಳಿತಿದ್ದರು. ಈ ಮೊದಲು ಸಂಸಾರಸ್ಥರಾಗಿದ್ದ ರಾಜಭಾರತಿ ಸ್ವಾಮೀಜಿ, ತದನಂತರ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ನಾಗಸಾಧುವಿನಂತೆ ಕಾಣುವ ಸ್ವಾಮೀಜಿಯವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್​, ಹಾಲಿ ಸಂಸದ ವಿ.ಎಸ್.ಉಗ್ರಪ್ಪ, ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಸೇರಿದಂತೆ ‌ಅನೇಕ ರಾಜಕಾರಣಿಗಳು, ಗಣ್ಯರು ಭೇಟಿಯಾಗಿ ದರ್ಶನ ಪಡೆದಿದ್ದಾರೆ.

ರಾಜಭಾರತಿ ಸ್ವಾಮೀಜಿ ಭೇಟಿ

ಮೌನಾಚರಣೆ:

ವರ್ಷದ 6 ತಿಂಗಳ ಕಾಲ ಮೌನ ವೃತಾಚರಣೆ ಮಾಡುವ ಸ್ವಾಮೀಜಿ, ಮುಂದಿನ 6 ತಿಂಗಳ ಕಾಲ ಮಾತನಾಡುತ್ತಾರೆ. ಮೌನ ವೃತಾಚರಣೆಯಲ್ಲಿ ಇರುವಾಗ ಸ್ಲೇಟ್​ನಲ್ಲಿ ಬರೆದು ಉತ್ತರಿಸುತ್ತಾರೆ. ಇಲ್ಲಿಗೆ ಭೇಟಿಯಾದ ಬಳಿಕ ನನಗೆ ಅಲ್ಪಮಟ್ಟಿಗೆ ಸಮಾಧಾನ ತಂದಿದೆ. ಎಲ್ಲ ಸಂಕಷ್ಟದಿಂದ ಹೊರಬರುವ ಇಂಗಿತವನ್ನ ಶಾಸಕ ಗಣೇಶ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details