ಕರ್ನಾಟಕ

karnataka

By

Published : Apr 9, 2021, 9:08 AM IST

ETV Bharat / state

ಹೊಸಪೇಟೆ: ಹೆಂಡ್ತಿಯನ್ನು ಕಾಲುವೆಗೆ ತಳ್ಳಿ ಕೊಲೆಗೈದ ಗಂಡ

ಗಂಡನೊಬ್ಬ ತನ್ನ ಹೆಂಡ್ತಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ. ಆರೋಪಿ ಪತಿ, ಪತ್ನಿಯ ಶೀಲದ ಬಗ್ಗೆ ಅನುಮಾನಪಟ್ಟು ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ದೊರೆತಿದೆ.

husband killed to his wife, husband killed to his wife in Hospet, Hospet news, Vijayanagar news, Vijayanagara crime news, ಹೆಂಡ್ತಿಯನ್ನು ಕೊಲೆ ಮಾಡಿದ ಗಂಡ, ಹೊಸಪೇಟೆಯಲ್ಲಿ ಹೆಂಡ್ತಿಯನ್ನು ಕೊಲೆ ಮಾಡಿದ ಗಂಡ, ಹೊಸಪೇಟೆ ಸುದ್ದಿ, ವಿಜಯನಗರ ಸುದ್ದಿ, ವಿಜಯನಗರ ಅಪರಾಧ ಸುದ್ದಿ,
ಹೆಂಡ್ತಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ ಗಂಡ

ಹೊಸಪೇಟೆ:ಪತ್ನಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ತಾಲೂಕಿನ ಗಾಳೆಮ್ಮಗುಡಿಯಲ್ಲಿ ನಡೆದಿದೆ.

ಕಳೆದ ಒಂಬತ್ತು ತಿಂಗಳ ಹಿಂದೆ ಗಾಳೆಮ್ಮ ಗುಡಿಯ ನಿವಾಸಿ ಲತಾ ಜೊತೆ ಹೊನ್ನೂರುಸ್ವಾಮಿ ವಿವಾಹವಾಗಿತ್ತು. ಬಳಿಕ ಪತ್ನಿಯ ಶೀಲದ ಬಗ್ಗೆ ಅನುಮಾನಪಡುತ್ತಿದ್ದ ಆರೋಪಿ ಪತಿ ಇದೀಗ ಆಕೆಯನ್ನು ಕೊಲೆ ಮಾಡಿದ್ದಾನೆ.

ಕಾಲುವೆಯಲ್ಲಿ ಪತ್ನಿ ಶವ

ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಬಳಿಕ ಪೊಲೀಸರು ಆರೋಪಿ ಹೊನ್ನೂರುಸ್ವಾಮಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ‌ ಕುರಿತು ಹಂಪಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details