ಹೊಸಪೇಟೆ:ಸಂಡೂರು ತಾಲೂಕಿನ ತೊಣಸಿಗೆರೆ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಅದಿರು ಸಾಗಣೆಗೆ ಸಂಬಂಧಿಸಿದಂತೆ ಆರು ಜನರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ರಮೇಶ, ಕಿಶೋರ ಬಾಬು, ಶಿವು ನಾಯ್ಕ, ಶಿವ ನಾಯ್ಕ, ಅಶೋಕ ಹಾಗೂ ರುದ್ರೇಶ ಬಂಧಿತರು. ಜಮೀನಿನಲ್ಲಿ ಅಂದಾಜು 2 ಲಕ್ಷ ರೂ. ಮೌಲ್ಯದ 40 ಮೆಟ್ರಿಕ್ ಟನ್ ಮ್ಯಾಂಗನೀಸ್ ಅದಿರನ್ನು ಪರವಾನಗಿ ಇಲ್ಲದೇ ಸಾಗಿಸಲಾಗುತ್ತಿತ್ತು. ಸಾಗಣೆಗೆ ಬಳಸಿದ್ದ ಎರಡು ಟಿಪ್ಪರ್ ಲಾರಿ, ಸ್ಕಾರ್ಪಿಯೋ ಹಾಗೂ ಐದು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.