ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಬೀಗಿರುವ ಆನಂದ್ ಸಿಂಗ್ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿದರು.
ಜನರ ತೀಪರ್ಪಿಗೆ ನಾವೆಲ್ಲ ತಲೆ ಬಾಗಲೇಬೇಕು : ಆನಂದ್ ಸಿಂಗ್ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣೆಯ ಮುಂಚಿತವಾಗಿಯೇ ದೇವರಿಗೆ ಹರಕೆ ನೀಡಬೇಕಿತ್ತು, ಆದರೆ ನೀತಿ ಸಂಹಿತೆ ಇದ್ದ ಕಾರಣ ಮಂದಿರಗಳಿಗೆ ಪೂಜೆ ಸಲ್ಲಿಸಲು ಆಗಿರಲಿಲ್ಲ ಎಂದರು.
ಹಂಪಿಯ ವಿರೂಪಾಕ್ಷ ಮತ್ತು ಭುವನೇಶ್ವರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಗರದ ಜನರಿಗೆ ಅವರು ಅಭಿನಂದನೆ ಸಲ್ಲಿಸಿದರು. ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ನನ್ನ ಗೆಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಯಾವಾಗಲೂ ಕ್ಷೇತ್ರದ ಜನರಿಗೆ ಅಭಾರಿಯಾಗಿರುತ್ತೇನೆ ಎಂದರು.
ಪುತ್ರನ ರಾಜಕೀಯ ಸೇರ್ಪಡೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದಾರ್ಥ್ ಸಿಂಗ್ಗೆ ರಾಜಕೀಯ ಬೇಡ ಎಂದಿದ್ದೇನೆ, ಎಲ್ಎಲ್ಬಿ ಅಭ್ಯಾಸ ಮಾಡುತ್ತಿದ್ದಾನೆ, ನ್ಯಾಯಾಲಯದಲ್ಲಿ ಕೆಲಸ ಮಾಡು ಎಂದಿದ್ದೇನೆ ಎಂದರು.
ಜನರ ತೀರ್ಮಾನದ ಮುಂದೆ ನಾವೆಲ್ಲಾ ತಲೆ ಬಾಗಲೇಬೇಕು, ಅವರು ಯಾರಿಗೆ ಮತ ನೀಡುತ್ತಾರೆ ಅವರು ಜನರ ಸೇವೆ ಮಾಡಬಹುದು ಎಂದರು.