ಕರ್ನಾಟಕ

karnataka

ETV Bharat / state

ಮಗನಿಗೆ ರಾಜಕೀಯಕ್ಕೆ ಬರೋದು ಬೇಡ ಅಂತ ಹೇಳಿದ್ದೇನೆ, ಆತ ಲಾಯರ್​ ಆಗಲಿ: ಆನಂದ್​ ಸಿಂಗ್​

ಚುನಾವಣೆಯ ಮುಂಚಿತವಾಗಿಯೇ ದೇವರಿಗೆ ಹರಕೆ ನೀಡಬೇಕಿತ್ತು, ಆದರೆ ನೀತಿ ಸಂಹಿತೆ ಇದ್ದ ಕಾರಣ ಮಂದಿರಗಳಿಗೆ ಪೂಜೆ ಸಲ್ಲಿಸಲು ಆಗಿರಲಿಲ್ಲ ಎಂದರು.

By

Published : Dec 9, 2019, 7:30 PM IST

ಜನರ ತೀರ್ಪಿಗೆ ನಾವೆಲ್ಲ ತಲೆ ಬಾಗಲೇಬೇಕು : ಆನಂದ್​ ಸಿಂಗ್​
ಜನರ ತೀರ್ಪಿಗೆ ನಾವೆಲ್ಲ ತಲೆ ಬಾಗಲೇಬೇಕು : ಆನಂದ್​ ಸಿಂಗ್​

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಬೀಗಿರುವ ಆನಂದ್​ ಸಿಂಗ್​ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸಿದರು.

ಜನರ ತೀಪರ್ಪಿಗೆ ನಾವೆಲ್ಲ ತಲೆ ಬಾಗಲೇಬೇಕು : ಆನಂದ್​ ಸಿಂಗ್​

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣೆಯ ಮುಂಚಿತವಾಗಿಯೇ ದೇವರಿಗೆ ಹರಕೆ ನೀಡಬೇಕಿತ್ತು, ಆದರೆ ನೀತಿ ಸಂಹಿತೆ ಇದ್ದ ಕಾರಣ ಮಂದಿರಗಳಿಗೆ ಪೂಜೆ ಸಲ್ಲಿಸಲು ಆಗಿರಲಿಲ್ಲ ಎಂದರು.

ಹಂಪಿಯ ವಿರೂಪಾಕ್ಷ ಮತ್ತು ಭುವನೇಶ್ವರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಗರದ ಜನರಿಗೆ ಅವರು ಅಭಿನಂದನೆ ಸಲ್ಲಿಸಿದರು. ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ನನ್ನ ಗೆಲ್ಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಯಾವಾಗಲೂ ಕ್ಷೇತ್ರದ ಜನರಿಗೆ ಅಭಾರಿಯಾಗಿರುತ್ತೇನೆ ಎಂದರು.

ಪುತ್ರನ ರಾಜಕೀಯ ಸೇರ್ಪಡೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದಾರ್ಥ್​ ಸಿಂಗ್​ಗೆ ರಾಜಕೀಯ ಬೇಡ ಎಂದಿದ್ದೇನೆ, ಎಲ್​ಎಲ್​ಬಿ‌ ಅಭ್ಯಾಸ ಮಾಡುತ್ತಿದ್ದಾನೆ, ನ್ಯಾಯಾಲಯದಲ್ಲಿ‌ ಕೆಲಸ ಮಾಡು ಎಂದಿದ್ದೇನೆ ಎಂದರು.

ಜನರ ತೀರ್ಮಾನದ ಮುಂದೆ ನಾವೆಲ್ಲಾ ತಲೆ ಬಾಗಲೇಬೇಕು, ಅವರು ಯಾರಿಗೆ ಮತ ನೀಡುತ್ತಾರೆ ಅವರು ಜನರ ಸೇವೆ ಮಾಡಬಹುದು ಎಂದರು.

ABOUT THE AUTHOR

...view details