ಕರ್ನಾಟಕ

karnataka

ETV Bharat / state

ಜಮ್ಮುವಿನಲ್ಲಿ‌ ಹಿಮಕುಸಿತ ; ಕರ್ತವ್ಯದಲ್ಲಿದ್ದ ಬೆಳಗಾವಿ ಯೋಧ ಹುತಾತ್ಮ

ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ ಸಂಭವಿಸಿದ ಪರಿಣಾಮ ಬೆಳಗಾವಿ ಮೂಲದ ಯೋಧನೋರ್ವ ಹುತಾತ್ಮರಾಗಿದ್ದಾರೆ.

By

Published : May 25, 2019, 10:45 AM IST

ಹುತಾತ್ಮ ಯೋಧ ವಿಠ್ಠಲ್ ರಾಮಪ್ಪ ಮೇತ್ರಿ

ಬೆಳಗಾವಿ: ಜಮ್ಮು-ಕಾಶ್ಮೀರದಲ್ಲಿನ ಭಾರೀ ಹಿಮಪಾತದಿಂದ ಬೆಳಗಾವಿ ಮೂಲದ ಯೋಧನೋರ್ವ ಹುತಾತ್ಮರಾಗಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಹಳ್ಳೂರ-ಶಿವಾಪುರ ಗ್ರಾಮದ ವಿಠ್ಠಲ್ ರಾಮಪ್ಪ ಮೇತ್ರಿ (36) ಹುತಾತ್ಮ ಯೋಧ.

ಹುತಾತ್ಮ ಯೋಧ ವಿಠ್ಠಲ್ ರಾಮಪ್ಪ ಮೇತ್ರಿ

ಮೇ.23 ರಂದು ಕರ್ತವ್ಯದಲ್ಲಿದ್ದಾಗ ಭಾರೀ ಹಿಮಪಾತ ಸಂಭವಿಸಿದ ಪರಿಣಾಮ ಯೋಧ ವಿಠ್ಠಲ್ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇಂದು ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ. ಯೋಧನ ಪಾರ್ಥಿವ ಶರೀರದ ಅಂತಿಮ‌ ದರ್ಶನಕ್ಕೆ ಹಾಗೂ ಮೆರವಣಿಗೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ABOUT THE AUTHOR

...view details